ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಾಶ್ಮೀರದ ವಿಶೇಷ ಸ್ಥಾನಮಾನ ವಾಪಸ್ ಪಡೆದಾಗಿನಿಂದಲೂ, ಅನೇಕ ಜನರಲ್ಲಿ ಕಾಶ್ಮೀರ, 370, 35ಎ ಈ ಮೂರು ವಿಷಯಗಳ ಸುತ್ತ ಹಲವು ಅನುಮಾನಗಳಿವೆ. ಇದರಿಂದ ದೇಶಕ್ಕಾಾಗುವ ಲಾಭ-ನಷ್ಟದ ಬಗ್ಗೆೆ ಚರ್ಚೆ ನಡೆಯುತ್ತಲೇ ಇದೆ. ಈ ಎಲ್ಲ ಗೊಂದಲಗಳಿಗೆ ಉತ್ತರವಾಗಿ, ಜನ-ಮನದ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಿಕೊಳ್ಳಲಾಗಿದೆ. ಕೇಂದ್ರ ಸರಕಾರ ತೆಗೆದುಕೊಂಡಿರುವ ಐತಿಹಾಸಿಕ ನಿರ್ಣಯದಿಂದ ಭಾರತಕ್ಕೆೆ ಆಗುವ ಲಾಭಗಳ ಬಗ್ಗೆೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ವಿಶೇಷ ಉಪನ್ಯಾಾಸ ನೀಡಲಿದ್ದಾರೆ. ಕಾರ್ಯಕ್ರಮವು ಕುಮಾರ ಕೃಪಾ ರಸ್ತೆೆಯಲ್ಲಿರುವ ಗಾಂಧಿಭವನದಲ್ಲಿ ಆ.23ರಂದು ಸಂಜೆ 5.30ಕ್ಕೆೆ ನಡೆಯಲಿದೆ. ಸಂತೋಷ್ ಅವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದ ಬಳಿಕ ಕರ್ನಾಟಕದಲ್ಲಿ ಭಾಗವಹಿಸುತ್ತಿಿರುವ ಮೊದಲ ಉಪನ್ಯಾಾಸ ಕಾರ್ಯಕ್ರಮವಾಗಿದೆ. ಜನಮನ ಸಂಸ್ಥೆೆಯ ಅಧ್ಯಕ್ಷ ಚೇತನ್.ಎಸ್ ಹಾಗೂ ಪ್ರಧಾನ ಕಾರ್ಯದರ್ಶಿ, ಬಿಜೆಪಿ ರಾಜ್ಯ ಸಹ-ವಕ್ತಾಾರ ಎ.ಎಚ್.ಆನಂದ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾಾರೆ.