Friday, 20th September 2024

ರಾಜ್ಯಸಭೆ ಕಲಾಪ ಅಲ್ಪಾವಧಿಗೆ ಮುಂದೂಡಿಕೆ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ತೆಗೆದು ಕೊಳ್ಳಬೇಕಾದ ಚರ್ಚೆಯ ವಿಷಯದ ಕುರಿತು ಗದ್ದಲದ ನಂತರ ರಾಜ್ಯಸಭೆಯನ್ನು ಗುರುವಾರ ಅಲ್ಪಾವಧಿಗೆ ಮುಂದೂಡಲಾಯಿತು.

ಕೆಳಮನೆಯು ಇಂದಿನ ಅಧಿವೇಶನದಲ್ಲಿ ಆಂಟಿ ಮೆರಿಟೈಮ್ ಪೈರಸಿ ಬಿಲ್, 2019, ಸಂವಿಧಾನ (ಪರಿಶಿಷ್ಟ ಬುಡಕಟ್ಟುಗಳು) ಆದೇಶ (ಎರಡನೇ ತಿದ್ದುಪಡಿ) ಮಸೂದೆ, 2022 ಮತ್ತು ಸಂವಿಧಾನ (ಪರಿಶಿಷ್ಟ ಬುಡಕಟ್ಟುಗಳು) ಆದೇಶ (ಮೂರನೇ ತಿದ್ದುಪಡಿ) ಮಸೂದೆ, 2022 ಅನ್ನು ಪರಿಗಣಿಸಲು ಮತ್ತು ಅಂಗೀಕರಿಸಲು ನಿರ್ಧರಿಸಲಾಗಿದೆ.

ಮೇಲ್ಮನೆಯು ಜಾಗತಿಕ ತಾಪಮಾನ ಏರಿಕೆಯ ಕುರಿತು ಅಲ್ಪಾವಧಿಯ ಚರ್ಚೆಯನ್ನು ನಡೆಸಲು ಉದ್ದೇಶಿಸಿದೆ.

ಬುಧವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತರ ಕರೆನ್ಸಿಗಳ ವಿರುದ್ಧ ಭಾರತೀಯ ರೂಪಾಯಿ ಬಲ ಗೊಳ್ಳುತ್ತಿದೆ ಮತ್ತು ಕೇಂದ್ರವು ಹಣದುಬ್ಬರ ವನ್ನು ಮತ್ತಷ್ಟು ತಗ್ಗಿಸುತ್ತದೆ ಎಂದು ಲೋಕಸಭೆಗೆ ತಿಳಿಸಿದರು.

ಕಲಾಪ ಆರಂಭ ವಾದ ಬೆನ್ನಲ್ಲೇ, ಚೀನಾ ಜತೆಗಿನ ಗಡಿ ಉದ್ವಿಗ್ನತೆ ಕುರಿತು ಚರ್ಚಿಸಲು ಅವಕಾಶ ನಿರಾಕರಿಸಿರುವುದು ಸೇರಿದಂತೆ ವಿವಿಧ ವಿಷಯ ಗಳ ವಿರುದ್ಧ ಪ್ರತಿಭಟಿಸಿ ವಿರೋಧ ಪಕ್ಷದ ಸದಸ್ಯರು ಲೋಕಸಭೆ ಮತ್ತು ರಾಜ್ಯಸಭೆಯಿಂದ ಹೊರನಡೆದರು.