Saturday, 26th October 2024

ಭೂಪರಿವರ್ತನೆಗೆ ಲಂಚ ಬೇಡಿಕೆ: ನಗರಸಭೆ ಅಧ್ಯಕ್ಷೆ ಪತಿ ಸೇರಿ ನಾಲ್ವರು ಲೋಕಾ ಪೊಲೀಸ್ ಬಲೆಗೆ

ಗೌರಿಬಿದನೂರು: ನಗರಸಭೆಯಿಂದ ಭೂ ಪರಿವರ್ತನೆಯ ದಾಖಲೆ ನೀಡಲು ಬೆಂಗಳೂ ರಿನ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥರೆಡ್ಡಿ ಎಂಬುವವರಿ0ದ 20 ಲಕ್ಷ ಲಂಚ ಪಡೆಯುತ್ತಿದ್ದ ಗೌರಿಬಿದನೂರು ನಗರಸಭೆ ಅಧ್ಯಕ್ಷೆ ಎಸ್. ರೂಪಾ ಅವರ ಪತಿ ಕೆ.ಎಸ್. ಅನಂತರಾಜು, ಸದಸ್ಯ ಆರ್.ಪಿ. ಗೋಪಿನಾಥ್, ಮಹಿಳಾ ಸದಸ್ಯರಾದ ರಾಜೇಶ್ವರಿ ಅವರ ಪತಿ ಮೈಲಾರಿ, ವರಲಕ್ಷ್ಮಿ ಅವರ ಪತಿ ಮಂಜುನಾಥ್ ಅವರನ್ನು ಲೋಕಾಯುಕ್ತ ಪೊಲೀ ಸರು ಬಂಧಿಸಿದ್ದಾರೆ.

ಬೆ0ಗಳೂರಿನ  ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರೆಡ್ಡಿ ಗೌರಿಬಿದನೂರು ಸಮೀಪ ಎಂಟು ಎಕರೆ ಕೃಷಿ ಜಮೀನು ಖರೀದಿಸಿದ್ದರು. ಆ ಜಮೀನನ್ನು ವಸತಿ ನಿವೇಶನಗಳಾಗಿ ಪರಿವರ್ತಿಸಲು ದಾಖಲೆ ಪಡೆಯಲು ನಗರಸಭೆಗೆ ಅರ್ಜಿ ಸಲ್ಲಿಸಿದ್ದರು. ಪ್ರತಿ ಎಕರೆಗೆ  ೫ ಲಕ್ಷದಂತೆ ಎಂಟು ಎಕರೆಗೆ ಒಟ್ಟು 40 ಲಕ್ಷ ಲಂಚ ನೀಡುವಂತೆ ಆರೋಪಿಗಳು  ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಉದ್ಯಮಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಮಂಜುನಾಥ ರೆಡ್ಡಿ ಅವರಿಂದ ಮೊದಲ ಕಂತಿನಲ್ಲಿ ? 20 ಲಕ್ಷ ಪಡೆಯುವ ವೇಳೆ ದೊಡ್ಡಬಳ್ಳಾಪುರದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಭೂತೇಗೌಡ ನೇತೃತ್ವದ ತಂಡ ನಾಲ್ವರನ್ನೂ ಬಂಧಿಸಿದೆ.

Read E-Paper click here