Thursday, 19th September 2024

ತ್ರಿಪುರ ಮಾಜಿ ಮುಖ್ಯಮಂತ್ರಿ ಪೂರ್ವಜರ ಮನೆಗೆ ಬೆಂಕಿ

ಅಗರ್ತಲಾ: ತ್ರಿಪುರ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿಪ್ಲಬ್​ ಕುಮಾರ್​ ದೇಬ್​​ ಅವರ ಪೂರ್ವಜರ ಮನೆಗೆ ದುಷ್ಕರ್ಮಿ ಗಳು ಬೆಂಕಿ ಹಚ್ಚಿದ್ದಾರೆ. ಈ ಮನೆಯ ಬಳಿ ನಿಂತಿದ್ದ ವಾಹನಗಳನ್ನು ಧ್ವಂಸ ಮಾಡಿದ್ದಾರೆ.

ಬಿಪ್ಲಬ್​ ಕುಮಾರ್​ ದೇಬ್​ ಅವರ ಅಜ್ಜಂದಿರು-ಅಪ್ಪ ಬಾಳಿ ಬದುಕಿದ್ದ ಈ ಮನೆ ಗೋಮತಿ ಜಿಲ್ಲೆಯ ಜಮ್ಜುರಿ ಗ್ರಾಮದಲ್ಲಿದೆ. ಬುಧವಾರ ಹಿರುಧನ್​ ದೇಬ್​ ಅವರ ವಾರ್ಷಿಕ ಪುಣ್ಯತಿಥಿ ಇತ್ತು. ಆದರೆ ಕೆಲವು ದುಷ್ಕರ್ಮಿಗಳ ಅಪ್ರಚೋದಿತವಾಗಿ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ದುಷ್ಕೃತ್ಯ ನಡೆಸಿದ್ದು ಸಿಪಿಐಎಂ (ಕಮ್ಯೂನಿಸ್ಟ್​ ಪಾರ್ಟಿ ಆಫ್​ ಇಂಡಿಯಾ (ಮಾರ್ಕ್ಸ್​ವಾದಿ) ಕಾರ್ಯಕರ್ತರು ಎಂದು ಬಿಜೆಪಿ ಆರೋಪಿಸಿದೆ. ದುಷ್ಕರ್ಮಿಗಳ ಗ್ಯಾಂಗ್​ ಬಂದು ಏಕಾಏಕಿ ದಾಳಿ ನಡೆಸಿದೆ. ಕಾರು, ಬೈಕ್​​ಗಳೆಲ್ಲ ಪುಡಿಪುಡಿಯಾಗಿವೆ. ಇನ್ನು ಬೆಂಕಿ ಹಾಕಿದ ಸಮಯದಲ್ಲಿ ಮನೆಯೊಳಗೆ ಯಾರೂ ಇರಲಿಲ್ಲ.

ತ್ರಿಪುರ ಸುಂದರಿ ದೇವಿ ದೇವಸ್ಥಾನದ ಅರ್ಚಕ ಜಿತೇಂದ್ರ ಕೌಶಿಕ್​ ಮೇಲೆ ಕೂಡ ಈ ದುಷ್ಟರು ಹಲ್ಲೆ ನಡೆಸಿದ್ದಾರೆ.

ಬುಧವಾರ ದೇವಸ್ಥಾನದಲ್ಲಿ ಒಂದು ಪೂಜೆ ನಡೆಯಬೇಕಿತ್ತು. ಹೀಗಾಗಿ ಒಂದು ಸಲ ಬಂದು ಹೋಗುವಂತೆ ಇಲ್ಲಿನ ಮುಖ್ಯ ಪುರೋಹಿತರು ನನಗೆ ಹೇಳಿದ್ದರು. ಆದರೆ ನಾನು ಬಂದು ಗಾಡಿ ನಿಲ್ಲಿಸುತ್ತಿದ್ದಂತೆ, ಅದನ್ನು ಪುಂಡರು ಧ್ವಂಸ ಮಾಡಿದ್ದಾರೆ. ನನ್ನ ಮೇಲೆಯೂ ಹಲ್ಲೆಗೆ ಮುಂದಾದರು ಎಂದು ಜಿತೇಂದ್ರ ತಿಳಿಸಿದ್ದಾರೆ.

Read E-Paper click here