Friday, 18th October 2024

ಸಿಎಂ ಭೇಟಿ ಮಾಡಿದ ಸ್ಯಾಾಂಡಲ್‌ವುಡ್ ನಿಯೋಗ

ಬೆಂಗಳೂರು: ಕೊರೋನಾ ಹಿನ್ನೆೆಲೆಯಲ್ಲಿ ಚಿತ್ರೋದ್ಯಮಕ್ಕೂ ಸಾಕಷ್ಟು ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಬೇಕೆಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿತು.

ಇದೇ ವೇಳೆ, ನಿಯೋಗದಲ್ಲಿದ್ದ ಹಿರಿಯ ನಟಿ ಭಾರತೀ ವಿಷ್ಣುವರ್ಧನ್ ಅವರು ಸೆ.15ಕ್ಕೆೆ ವಿಷ್ಣು ಸ್ಮಾರಕಕ್ಕೆ ಭೂಮಿ ಪೂಜೆಗೆ ಆಹ್ವಾನಿಸಿದರು. ಮುಖ್ಯಮಂತ್ರಿಗಳು ಭೂಮಿ ಪೂಜೆಗೆ ಆನ್‌ಲೈನಿನಲ್ಲೇ ಚಾಲನೆ ನೀಡುವರು ಎಂದು ಭಾರತೀ ಹೇಳಿದರು.