Friday, 25th October 2024

ಕಾಶಿ ವಿಶ್ವನಾಥ ದೇಗುಲದಲ್ಲಿ ಸಿರಿಧಾನ್ಯ ಪ್ರಸಾದ

ವಾರಣಾಸಿ: ಸಿರಿಧಾನ್ಯಗಳ ಹೆಚ್ಚಿನ ಬಳಕೆಯನ್ನು ಕೇಂದ್ರ ಸರ್ಕಾರ ಉತ್ತೇಜಿಸುತ್ತಿದೆ. ಇದಕ್ಕೆ ಕೈಜೋಡಿಸಿರುವ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇಗುಲವು ಭಕ್ತರಿಗೆ ಸಿರಿಧಾನ್ಯಗಳಿಂದ ತಯಾರಿಸಿದ “ಶ್ರೀ ಅನ್ನ’ ಪ್ರಸಾದ ವಿತರಿಸಲು ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಂಸತ್‌ ಕ್ಷೇತ್ರ ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದಲ್ಲಿ ಇನ್ನು ಮುಂದೆ “ಲಡ್ಡು ಪ್ರಸಾದ’ದ ಬದಲಾಗಿ “ಸಿರಿಧಾನ್ಯ ಲಡ್ಡು’ ನೀಡಲಾಗುತ್ತದೆ. ಸಿರಿಧಾನ್ಯಗಳನ್ನು ಪ್ರಧಾನಿ ಮೋದಿ ಅವರು “ಶ್ರೀ ಅನ್ನ’ ಎಂದು ಇತ್ತೀಚೆಗೆ ಹೆಸರಿಸಿದ್ದರು.

ಈ ಕುರಿತು ಮಾಹಿತಿ ನೀಡಿದ ವಾರಣಾಸಿ ಮುಖ್ಯ ಅಭಿವೃದ್ಧಿ ಅಧಿಕಾರಿ ಹಿಮಾಂಶು ನಾಗ್‌ಪಾಲ್‌, “ಉತ್ತರ ಪ್ರದೇಶ ಸರ್ಕಾರದ ಅದೇಶದ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳು “ಶ್ರೀ ಅನ್ನ’ ಪ್ರಸಾದ ತಯಾರಿಸಲಿದ್ದಾರೆ.

ಸಿರಿಧಾನ್ಯ, ಬೆಲ್ಲ, ಎಳ್ಳು, ಗೋಡಂಬಿ, ಬಾದಾಮಿ, ಶುದ್ಧ ತುಪ್ಪ ಮತ್ತು ಖೋವಾದಿಂದ ಪ್ರಸಾದ ತಯಾರಿಸ ಲಾಗುತ್ತದೆ. ಪ್ರಸಾದದ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ,’ ಎಂದು ತಿಳಿಸಿದ್ದಾರೆ.