Thursday, 19th September 2024

ಭೀಕರ ರಸ್ತೆ ಅಪಘಾತ: ಹತ್ತು ಮಂದಿ ಸ್ಥಳದಲ್ಲೇ ಸಾವು

ಗಾಂಧಿನಗರ: ಗುಜರಾತ್​ನ ಗಾಂಧಿನಗರ ಜಿಲ್ಲೆಯಲ್ಲಿ ಬಸ್​ಗಾಗಿ ಕಾಯುತ್ತಿದ್ದ ಜನರ ಮೇಲೆ ಬಸ್​ ಹರಿದು ಹತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಲವರು ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.

ಕಲೋಲ್‌ ತಾಲೂಕಿನ ಅಂಬಿಕಾ ನಗರ ಬಸ್ ನಿಲ್ದಾಣದ ಬಳಿ ಬಸ್‌ಗಾಗಿ ಪ್ರಯಾಣಿಕರು ಕಾಯುತ್ತಿದ್ದರು. ಈ ವೇಳೆ ಸಾರಿಗೆ ಬಸ್ಸೊಂದು ನಿಲ್ದಾಣದ ಹೊರಗೆ ನಿಂತಿತ್ತು. ಬಸ್‌ ಮುಂಭಾಗದಲ್ಲಿ ಪ್ರಯಾಣಿಕರು ಎರಡನೇ ಬಸ್‌ಗಾಗಿ ಕಾಯುತ್ತಿದ್ದರು. ಆಗ ಹಿಂದಿನಿಂದ ಬಂದ ಖಾಸಗಿ ಬಸ್ ಸರ್ಕಾರಿ ಸಾರಿಗೆ ಬಸ್‌ಗೆ​ ಡಿಕ್ಕಿ ಹೊಡೆದಿದೆ.

ಹೀಗಾಗಿ ನಿಂತಿದ್ದ ಸಾರಿಗೆ ಬಸ್​ ರಭಸದಿಂದ ಮುಂದೆ ಸಾಗಿ ಜನರ ಮೇಲೆ ಹರಿಯಿತು ಎಂದು ಹೇಳಲಾಗುತ್ತಿದೆ.