Friday, 20th September 2024

Minister K N Rajanna: ಶ್ರೀ ವಿದ್ಯಾಗಣಪತಿ ಮಹಾಮಂಡಳಿ ಪೂಜಾ ಕಾರ್ಯಕ್ರಮ

ಮಧುಗಿರಿ : ಪಟ್ಟಣದ ಶ್ರೀ ವಿದ್ಯಾಗಣಪತಿ ಮಹಾಮಂಡಳಿ ಪೂಜಾ ಕಾರ್ಯಕ್ರಮದಲ್ಲಿ ಶನಿವಾರ ಸಹಕಾರ ಸಚಿವ‌ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಭಾಗವಹಿಸಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಲಾಲಾಪೇಟೆ ಮಂಜುನಾಥ ಹಾಗೂ ಪುರಸಭಾ ಸದಸ್ಯರು ಆಗಿರುವ ಶ್ರೀಧರ್, ಆಚಾರ್ ಮಂಜುನಾಥ್, ಕಿಶೋರ್, ಆನಂದ್, ಮಂಜುನಾಥ, ಮಹಾಮಂಡಲ ಮಾಜಿ ಅಧ್ಯಕ್ಷರದ ಗಂಗಣ್ಣ, ಧಾರ್ಮಿಕ ಮುಖಂಡರಾದ ಶ್ರೀನಿವಾಸ್ ಮೂರ್ತಿ,ತುಂಗೋಟಿ ರಾಮಣ್ಣ, ನಂಜುಂಡರಾಜು ಹಾಗೂ ಕಮಿಟಿ ಸದಸ್ಯರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.