Friday, 20th September 2024

ಚಿಂತಾಮಣಿಯಲ್ಲಿ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಗಣಪತಿ ಹಬ್ಬ

ಚಿಂತಾಮಣಿ: ಗಣೇಶ ಚತುರ್ಥಿ ಹಿನ್ನೆಲೆ ಮುಸ್ಲಿಂ ಮುಖಂಡರಾದ ಶೇಖ್ ಸಾಧಿಕ್ ರಜ್ವಿ ಗಣಪನಿಗೆ ಪೂಜೆ ಸಲ್ಲಿಸಿ ಪ್ರಸಾದ  ಸೇವಿಸುವ ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಘಟನೆ ಚಿಂತಾಮಣಿ ನಗರದ ವಾರ್ಡ್ ನಂಬರ್ ೨೯ನೆಕ್ಕುಂದಿ ಪೇಟೆಯ ಬಹಜನ ಗುಡಿ ಹತ್ತಿರ ನಡೆದಿದೆ.

ನಗರದ ನೆಕ್ಕುಂದಿಪೇಟೆಯಲ್ಲಿ ಪ್ರತಿಷ್ಠಾಪನೆಯಾಗಿರುವ ಗಣೇಶನಿಗೆ ಪೂಜೆ ಸಲ್ಲಿಸುವ ವೇಳೆಯಲ್ಲಿ ಮುಸ್ಲಿಂ ಬಾಂಧವರು ಕೂಡ ಹಾಜರಿದ್ದು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

ಈ ವೇಳೆ ಗಣಪನಿಗೆ ಆರತಿ ಬೆಳಗಿ,ಪೂಜೆ ಸಲ್ಲಿಸಿದ ಬಳಿಕ ಮುಸ್ಲಿಂ ಸ್ನೇಹಿತರು ಪ್ರಸಾದ ಕೂಡ ಸೇವಿಸಿದ್ದಾರೆ.ಈ ಮೂಲಕ ನೆಕ್ಕುಂದಿ ಪೇಟೆ ಗಣೇಶ ಪ್ರತಿಷ್ಟಾಪನೆ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ.

ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ರಮೇಶ, ಟಪಾಲ್ ಸುರೇಶ್, ನಾಗಾರ್ಜುನ, ಗಿರೀಶ, ಚಂದ್ರು, ಮಹೇಶ, ನವೀನ್, ಮೂರ್ತಿ, ಗಿರಿ, ಶ್ರೀನಾಥ್ ಸಾರ್ವಜನಿಕರು ಮಹಿಳೆಯರು ಉಪಸ್ಥಿತರಿದ್ದರು.