Thursday, 19th September 2024

Dodda Ganesh : ಕೀನ್ಯಾ ತಂಡದ ಕೋಚ್‌ ಆಗಿ ಒಂದೇ ತಿಂಗಳಲ್ಲಿ ವಜಾಗೊಂಡ ದೊಡ್ಡ ಗಣೇಶ್‌

Dodda Ganesh

ನವದೆಹಲಿ: ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗ ದೊಡ್ಡ ಗಣೇಶ್ (Dodda Ganesh) ಅವರನ್ನು ಕ್ರಿಕೆಟ್ ಆಗಸ್ಟ್ 14ರಂದು ಕೀನ್ಯಾ ಹಠಾತ್ತನೆ ವಜಾಗೊಳಿಸಿದೆ. ಕೋಚ್ ಆಗಿದ್ದ ತಕ್ಷಣ ಗಣೇಶ್‌ ಕೀನ್ಯಾ ತಂಡದ ಸುಧಾರಣೆ ಬಗ್ಗೆ ಮಾತನಾಡಿದ್ದರು. 2011ರ ಆವೃತ್ತಿಯಲ್ಲಿ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಜಂಟಿಯಾಗಿ ಆತಿಥ್ಯ ವಹಿಸಿದ್ದ ವೇಳೆಯಲ್ಲಿ ಕೀನ್ಯಾ ವಿಶ್ವ ಕಪ್‌ಗೆ ಪ್ರವೇಶ ಪಡೆದಿತ್ತು. ಅದೇ ರೀತಿ ಮತ್ತೊಂದು ಬಾರಿ ವಿಶ್ವ ಕಪ್‌ಗೆ ಎಂಟ್ರಿ ಪಡೆಯುತ್ತೇವೆ ಎಂದು ಕಳೆದ ತಿಂಗಳು ಸಿಖ್ ಯೂನಿಯನ್ ಕ್ಲಬ್‌ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ತಮ್ಮ ಗುರಿಯನ್ನು ಸ್ಪಷ್ಟಪಡಿಸಿದ್ದರು.

ಏಕದಿನ ಮತ್ತು ಟಿ 20 ವಿಶ್ವಕಪ್ಗಳಿಗೆ ಅರ್ಹತೆ ಪಡೆಯುವುದು ನಮ್ಮ ಗುರಿಯಾಗಿದೆ. ಆದರೆ ಅದಕ್ಕೂ ಮೊದಲು, ನಾವು ಸಿದ್ಧತೆ ಪ್ರಾರಂಭಿಸಬೇಕು. ಪ್ರಗತಿ ಸಾಧಿಸಲು ಪ್ರಾರಂಭಿಸಬೇಕು. ನಾವು ತಯಾರಿ ಪ್ರಾರಂಭಿಸಿದ್ದೇವೆ ಮತ್ತು ಉತ್ತಮ ಸೂಚನೆಗಳಿವೆ. ನಮಗೆ ಸಮಯ ಉಳಿದಿಲ್ಲ, ಆದ್ದರಿಂದ ನಾನು ಸ್ಥಳೀಯ ಲೀಗ್ ಪಂದ್ಯಗಳನ್ನು ವೀಕ್ಷಿಸುವೆ . ನಂತರ ಫಿಟ್ನೆಸ್ ಪರೀಕ್ಷೆಗಳು ನಡೆಯಲಿವೆ. ನಾವು ನಿಧಾನವಾಗಿ ಅಭಿವೃದ್ಧಿ ಇಳಿಯುತ್ತೇವೆ,” ಎಂದು ಗಣೇಶ್ ಕ್ರಿಕ್ಇನ್ಫೋಗೆ ತಿಳಿಸಿದ್ದರು.

ಗಣೇಶ್ ಅವರ ಅಲಭ್ಯತೆಯೊಂದಿಗೆ ಲಮೆಕ್ ಒನ್ಯಾಂಗೊ ಮತ್ತು ಜೋಸೆಫ್ ಅಂಗಾರ ಅವರು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ 2027 ಚಾಲೆಂಜ್ ಲೀಗ್ ಗ್ರೂಪ್ ಎ ಸುತ್ತಿಗೆ ತರಬೇತುದಾರರಾಗಿ ಮುಂದುವರಿಯಲಿದ್ದಾರೆ. ಇನ್‌ಸೈಡ್‌ ಸ್ಪೋರ್ಟ್ ವರದಿ ಪ್ರಕಾರ, ಆಗಸ್ಟ್ 7 ರಂದು ಗಣೇಶ್ ಅವರೊಂದಿಗೆ ಸಹಿ ಹಾಕಿದ ಒಪ್ಪಂದವನ್ನು ಅಮಾನ್ಯವೆಂದು ಪರಿಗಣಿಸುವ ನಿರ್ಣಯವನ್ನು ಕ್ರಿಕೆಟ್ ಕೀನ್ಯಾ ಅಂಗೀಕರಿಸಿದೆ.

ಗಣೇಶ್ ಅವರ ಆರಂಭಿಕ ನೇಮಕವು ಈ ತಿಂಗಳು ಐಸಿಸಿ ಡಿವಿಷನ್ 2 ಚಾಲೆಂಜ್ ಲೀಗ್‌ನಲ್ಲಿ ನಡೆಯಬೇಕಿತ್ತು. ಅಲ್ಲಿ ಅವರು ಪಪುವಾ ನ್ಯೂ ಗಿನಿ, ಕತಾರ್, ಡೆನ್ಮಾರ್ಕ್ ತಂಡವನ್ನು ಎದುರಿಸಲಿದ್ದರು. ನಂತರ ಅಕ್ಟೋಬರ್‌ನಲ್ಲಿ ಟಿ 20 ವಿಶ್ವಕಪ್ ಆಫ್ರಿಕಾ ಅರ್ಹತಾ ಪಂದ್ಯಗಳನ್ನು ಎದುರಿಸಬೇಕಾಗಿತ್ತು.

ನೇಮಕ ಪ್ರಕ್ರಿಯೆಯಲ್ಲಿನ ಅಕ್ರಮಗಳು ದೊಡ್ಡ ಗಣೇಶ್ ವಜಾಕ್ಕೆ ಪ್ರಮುಖ ಕಾರಣ ಎಂದು ವರದಿಯಾಗಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಮೊದಲೇ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದ ಕಾರಣ ಗಣೇಶ್ ಅವರನ್ನು ಹಠಾತ್ ತೆಗೆದುಹಾಕುವ ಬಗ್ಗೆ ಹೇಳಿಕೆ ನೀಡಲಾಗಿದೆ.

ಇದನ್ನೂ ಓದಿ: Ananya Panday : ಅನನ್ಯಾ ಪಾಂಡೆಗೆ ರಿಯಾನ್ ಪರಾಗ್‌ಗಿಂತ ವಿರಾಟ್‌ ಕೊಹ್ಲಿಯೇ ಫೇವರಿಟ್‌

ಕ್ರಿಕೆಟ್ ಕೀನ್ಯಾ ಸಂವಿಧಾನದ 5.9 ಮತ್ತು 8.4.3 ನೇ ವಿಧಿಗಳ ಅಡಿಯಲ್ಲಿ 2024 ರ ಆಗಸ್ಟ್ 28 ರಂದು ಅಂಗೀಕರಿಸಲಾದ ಕ್ರಿಕೆಟ್ ಕೀನ್ಯಾ ಕಾರ್ಯನಿರ್ವಾಹಕ ಮಂಡಳಿಯ ನಿರ್ಣಯದ ಅಡಿಯಲ್ಲಿ, ಸ್ಥಾಪಿತ ಕಾರ್ಯವಿಧಾನಗಳನ್ನು ಅನುಸರಿಸುವ ಕೊರತೆಯಿಂದಾಗಿ ಪುರುಷರ ಕ್ರಿಕೆಟ್ ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರರಾಗಿ ನಿಮ್ಮ ನೇಮಕವನ್ನು ಅನುಮೋದಿಸಲು ಕಾರ್ಯನಿರ್ವಾಹಕ ಮಂಡಳಿ ನಿರಾಕರಿಸಿದೆ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ ಎಂದು ತಂಡ ಹೇಳಿದೆ.

ಕರ್ನಾಟಕದ ಬೌಲಿಂಗ್ ಆಲ್ರೌಂಡರ್ ಒಟ್ಟು ಐದು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಗಣನೀಯವಾಗಿ ದೇಶೀಯ ಕ್ರಿಕೆಟ್ ಆಡಿದ್ದರು. ಒಟ್ಟು 493 ವಿಕೆಟ್ ಉರುಳಿಸಿದ್ದಾರೆ. ಒಂದು ದಶಕದ ದೇಶೀಯ ವೃತ್ತಿಜೀವನದಲ್ಲಿ ಒಟ್ಟು 2548 ರನ್‌ಗಳನ್ನು ಬಾರಿಸಿದ್ದಾರೆ.