Thursday, 19th September 2024

Dowry Harassment: ವರದಕ್ಷಿಣೆ ಕಿರುಕುಳ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

ಚಿಂತಾಮಣಿ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ತಾಳಲಾರದೇ ಯುವತಿ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಂತಾಮಣಿ ನಗರದಲ್ಲಿ ನಡೆದಿದೆ.

ಮೃತ ಯುವತಿಯನ್ನು ನಗರದ ಗಾಂಧಿನಗರ ಬಿಂದುಶ್ರೀ (22) ಎಂದು ತಿಳಿದು ಬಂದಿದೆ. ಕಳೆದ 7 ತಿಂಗಳ ಹಿಂದೆ ಯಷ್ಟೇ ಬಿಂದುಶ್ರೀ ಯನ್ನು ಆವಲಹಳ್ಳಿ ಬಳಿಯ ಹೀರಾಂಡಹಳ್ಳಿಯ ರಾಘವೇಂದ್ರ ಎಂಬುವವರಿಗೆ 2024 ರ ಫೆಬ್ರವರಿ 21 ರಂದು ಕೈವಾರ ಸಮೀಪ ಮದುವೆ ಮಾಡಿಕೊಡಲಾಗಿತ್ತು.ಕೇವಲ ಎರಡೇ ತಿಂಗಳಿಗೆ ನಂತರ ಕಾರು ಹಾಗೂ 20 ಲಕ್ಷ ಹಣಕ್ಕಾಗಿ ಬಿಂದುಶ್ರೀ ಗೆ ಪೀಡಿಸುತ್ತಿದ್ದು, ಇದೇ ವಿಚಾರವನ್ನು ಬಿಂದು ಶ್ರೀ ಪೋಷಕರಿಗೆ ಮಾಹಿತಿ ತಿಳಿಸಿದ್ದಾಳೆ. ಆದರೆ ಬಿಂದುಶ್ರೀ ಪೋಷಕರು ಅಷ್ಟೊಂದು ಹಣ ನಮ್ಮಬಳಿ ಇಲ್ಲಾ ಸಾಧ್ಯವಾದಷ್ಟು ಕೊಡುವುದಾಗಿ ತಿಳಿಸಿದ್ದಾರೆ.

ಇನ್ನೂ ಚಿಂತಾಮಣಿ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡುತ್ತಿದ್ದ ಬಿಂದುಶ್ರೀಯನ್ನು ಗಂಡನ ಮನೆಗೆ ಬಿಡ ಲೆಂದು ಹೋದ ವೇಳೆ ಮನೆಗೆ ಬರಬೇಡ ಎಂದು ಗಂಡನ ಮನೆಯವರು ವಾಪಸ್ ಕಳುಹಿಸಿದ್ದಾರೆ. ಇನ್ನೂ ಇದೇ ವಿಚಾರವನ್ನು ತವರು ಮನೆಗೆ ಮುಟ್ಟಿಸಿದ್ದಾಳೆ. ತದ ನಂತರ ಮಗಳನ್ನು ಮನೆಗೆ ವಾಪಸ್ ಕರೆತಂದು ಸೆಪ್ಟೆಂಬರ್ ೧೨ ರಂದು ಅವಲ ಹಳ್ಳಿಯಲ್ಲಿ ದೂರು ದಾಖಲಿಸಿದ್ದರು.

ಇನ್ನೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದಂತೆ ರಾಘವೇಂದ್ರ ಅವರ ತಂದೆ ಮುನಿರಾಜು ನಮಗೆ ಗೃಹ ಸಚಿವ ಮಿಲಿಟರಿ ಸಪೋರ್ಟ್ ಇದೆ ಎಂದು ಬೆದರಿಸಿದ್ದಾರೆ. ತದ ನಂತರ ತಮ್ಮ ಜೀವನ ನಮ್ಮದು ಎಂಬಂತೆ ಚಿಂತಾ ಮಣಿ ನಗರದ ಮನೆಯಲ್ಲಿ ಇರುವಾಗ ಬಿಂದುಶ್ರೀ ಸೆ.14ರ ಸಂಜೆ ೫ ಗಂಟೆಯಲ್ಲಿ ತಾಯಿ ದೇವಸ್ಥಾನಕ್ಕೆಂದು ಹೋದ ವೇಳೆ ತಂದೆಯನ್ನು ತಿಂಡಿ ತರುವಂತೆ ಅಂಗಡಿ ಕಳುಹಿಸಿದ್ದಾರೆ. ತದ ನಂತರ ಸಂಜೆ 6.15ರಲ್ಲಿ ಮನೆಗೆ ಬಂದು ನೋಡಿದ ವೇಳೆ ಬಿಂದು ಶ್ರೀ ಮನೆಯ ಪ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಸಿದ್ದು ಗಾಬರಿ ಯಿಂದ ಮನೆಯ ಪಕ್ಕದ ಸಹಾಯದಿಂದ ಕೆಳಕ್ಕೆ ಇಳಿಸಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು ನಂತರ ಮೃತಪಟ್ಟಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇನ್ನೂ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು ಪೋಷಕರ ಹೇಳಿಕೆಯಂತೆ ಗಂಡ ರಾಘವೇಂದ್ರ, ಮುನಿರಾಜು, ಲತಾ, ನರಸಿಂಹಯ್ಯ ಅವರ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Chickballapur News: ಬಾಗೇಪಲ್ಲಿ ಶಾಲಾ ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸುತ್ತಿರುವ ಶಾಲೆ

Leave a Reply

Your email address will not be published. Required fields are marked *