Friday, 20th September 2024

Vijayapura news: ಸೆ.23ರಂದು ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ.ಮರಗೂರ ಸರ್ವ ಸಾಧಾರಣ ಸಭೆ

ಇಂಡಿ: ತಾಲೂಕಿನ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಮರಗೂರ ತಾ.ಇಂಡಿ ಜಿ. ವಿಜಯಪೂರ ಇವರು ಕಾರ್ಖಾನೆಯ ಎಲ್ಲಾ ಷೇರುದಾರ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದು, ಸನ್ 2023-24ನೇ ಸಾಲಿನ 6ನೇ ವಾಷೀಕ ಸರ್ವಸಾಧಾರಣ ಸಭೆಯನ್ನು ಸೆ.23 ರಂದು ಬೆಳಗ್ಗೆ 11 ಗಂಟೆಗೆ ಕಾರ್ಖಾನೆಯ ಆವರಣದಲ್ಲಿ ಹಮ್ಮಿಕೊಳ್ಳ ಲಾಗಿದೆ.

ಈ ಸಭೆಯ ಅಧ್ಯಕ್ಷತೆಯನ್ನು ಶಾಸಕ ಯಶವಂತರಾಯಗೌಡ.ವ್ಹಿ ಪಾಟೀಲ ವಹಿಸಲ್ಲಿದ್ದು ಈ ಸಭೆಯ ಕುರಿತು ಈಗಾಗಲೇ ಸದಸ್ಯರಿಗೆ ನೋಟಿಸ್ ಹಾಗೂ ವರದಿಯನ್ನು ಕಾರ್ಯವ್ಯಾಪ್ತಿಯ ಗ್ರಾಮಗಳ ನಮ್ಮ ಕಾರ್ಖಾನೆಯ ಕ್ಷೇತ್ರ ಸಹಾಯಕರ ಮೂಲಕ ಹಾಗೂ ಅಂಚೇ ಮುಖಾಂತರ ಕಳುಹಿಸಲಾಗಿದೆ. ಒಂದು ವೇಳೆ ಈ ಮಾಹಿತಿಯು ಸಕಾಲಕ್ಕೆ ತಲುಪದೆ ಇದ್ದಲ್ಲಿ ಸಹ ಗೌರವಾನ್ವಿತ ಸದಸ್ಯರು ಸಮಯಕ್ಕೆ ಸರಿಯಾಗಿ ಸಭೆಗೆ ಉಪಸ್ಥಿತರಿರಲು ವಿನಂತಿಸಲಾಗಿದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಗೆ ತಿಳಿಸಿದ್ದಾರೆ.