Saturday, 21st September 2024

Chickballapur News: ಅವಕಾಶ ಕೊಟ್ಟರೆ ಮುಂದಿನ ತಾಲೂಕು ಅಥವಾ ಜಿಲ್ಲಾ ಪಂಚಾಯತಿ ಚುನಾ ವಣೆಗೆ ಸ್ಪರ್ಧಿಸುವೆ-ಪುರಸಭೆಯ ಸದಸ್ಯ ಗಡ್ಡಂ ರಮೇಶ್

ಬಾಗೇಪಲ್ಲಿ: ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯಿತಿಯ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಅದಕ್ಕೆ ಅವಕಾಶ ಕೊಟ್ಟರೆ ನಾನು ಸ್ಪರ್ಧಿಸಿ ಜನಸೇವೆಗೆ ಸಿದ್ದನಿದ್ದೇನೆ ಎಂದು ಸಮಾಜ ಸೇವಕ ಹಾಗೂ ಪುರಸಭೆಯ ಸದಸ್ಯ ಗಡ್ಡಂ ರಮೇಶ್ ತಿಳಿಸಿದರು.

ಬಾಗೇಪಲ್ಲಿ ಪಟ್ಟಣದ ಗಡ್ಡಂ ರಮೇಶ್ ಅಭಿಮಾನಿಗಳು ಬಳಗ ವತಿಯಿಂದ ಏರ್ಪಡಿಸಿದ್ದ ಅವರ 42ನೇ ಹುಟ್ಟು ಹಬ್ಬದ ಪ್ರಯುಕ್ತ ಗೂಳೂರು ವೃತ್ತದಲ್ಲಿ ಅನ್ನದಾನ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ರೋಗಿಗಳಿಗೆ ಬ್ರೆಡ್ ಹಾಗೂ ಹಣ್ಣು ಹಂಪಲುಗಳನ್ನು ವಿತರಣೆ ಮಾಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಾನು ಈಗಾಗಲೇ ಪುರಸಭಾ ಸದಸ್ಯನಾಗಿ ನನ್ನ 10 ನೇ ವಾರ್ಡಿನ ನಾಗರಿಕರ ಮೂಲಭೂತ ಸೌಕರ್ಯಗಳು ಹಾಗೂ ಸಮಸ್ಯೆಗಳನ್ನು ಬಗೆಹರಿಸಿ, ಪಟ್ಟಣದ 23 ವಾರ್ಡಗಳ ಪೈಕಿ ನನ್ನ 10ನೇ ವಾರ್ಡಿಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸಂಪೂರ್ಣ ಸಹಕಾರದೊಂದಿಗೆ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ. ಇದಕ್ಕೆಲ್ಲ ನಮ್ಮ ಶಾಸಕ ಎಸ್.ಎನ್ ಸುಬ್ಬಾರೆಡ್ಡಿಯವರ  ಅಭಯಾಸ್ತ ಸಹಕಾರ  ಇದೆ.

ಆ ನಿಟ್ಟಿನಲ್ಲಿ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ನನಗೆ ಅವಕಾಶ ಕೊಟ್ಟರೆ ನಾನು ಸ್ಪರ್ಧಿಸಿ ಜನರ ಸೇವೆಯನ್ನು ಮಾಡಲು ಮತ್ತಷ್ಟು ಉತ್ಸುಕನಾಗಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕು ಗಡ್ಡಂ ರಮೇಶ್ ಅಭಿಮಾನಿಗಳಾದ ತೇಜಾ,ನರೇಶ್, ಗಿರೀಶ್, ಹರೀಶ್, ರವಿ ಇನ್ನೂ ಮುಂತಾದ ಗಡ್ಡಂ ರಮೇಶ್ ಅಭಿಮಾನಿಗಳು ಹಾಜರಿದ್ದರು.

ಇದನ್ನೂ ಓದಿ: Chickballapur News: ಗುಡಿ ಗೋಪುರಗಳ ಕೆತ್ತನೆಯ ಹಿಂದೆ ವಿಶ್ವಕರ್ಮರ ಅಪಾರ ಶ್ರಮವಿದೆ-ತಹಸೀಲ್ದಾರ್ ಮನೀಶಾ ಮಹೇಶ್ ಪತ್ರಿ