Saturday, 21st September 2024

Pratap Simha: ನಿಮ್ಮ ರಕ್ಷಣೆಗೆ ಪೆಟ್ರೋಲ್ ಬಾಂಬ್, ತಲ್ವಾರ್ ಹಿಡಿದು ಶೋಭಾಯಾತ್ರೆಯಲ್ಲಿ ಭಾಗಿಯಾಗಿ: ಪ್ರತಾಪ್‌ ಸಿಂಹ ಕರೆ

Pratap Simha

ಶಹಾಪುರ : ಸರಕಾರ ನಿಮ್ಮ ರಕ್ಷಣೆ ಮಾಡಲು ಬರುವುದಿಲ್ಲ, ಹೀಗಾಗಿ ಗಣೇಶ ಮೆರವಣಿಗೆಯಲ್ಲಿ ನಿಮ್ಮ ರಕ್ಷಣೆ ನೀವೇ ಮಾಡಿಕೊಳ್ಳಬೇಕು. ಇದಕ್ಕಾಗಿ ನೀವು ಕೂಡ ಮುಸ್ಲಿಮರಿಗೆ ಸೆಡ್ಡು ಹೊಡೆಯಲು ಪೆಟ್ರೋಲ್ ಬಾಂಬ್, ತಲ್ವಾರ್ ಹಿಡಿದು ಶೋಭಾಯಾತ್ರೆಯಲ್ಲಿ ಭಾಗಿಯಾಗಬೇಕೆಂದು ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ಕರೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಮುಸ್ಲಿಮರು ಪೆಟ್ರೋಲ್ ಬಾಂಬ್ ಹಾಕಿದರೆ ನೀವು ಮರಳಿ ಹೂಗುಚ್ಛ ನೀಡಬೇಕಾಗಿಲ್ಲ. ಗಣೇಶ ಮೆರವಣಿಗೆ ಮೇಲೆ ಪೆಟ್ರೋಲ್ ಬಾಂಬ್ , ಕಲ್ಲು ತೂರಾಟ ಮಾಡುವುದಾದರೆ, ಹಿಂದುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಪೆಟ್ರೊಲ್ ಬಾಂಬ್, ತಲ್ವಾರ್ ಹಿಡಿದು ಗಣೇಶ ಮೆರವಣಿಗೆಗೆ ಸನ್ನದ್ಧರಾಗಬೇಕು. ಹಿಂದುಗಳು ಸಹ ಕ್ರಿಯೆಗೆ ಪ್ರತಿಕ್ರಿಯೆ ನೀಡಬೇಕೆಂದು ತಿಳಿಸಿದರು.

ಇನ್ನು ಮುನಿರತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರತಾಪ್‌ ಸಿಂಹ, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದರೆ ಗೌಡರ ಕೋಟಾದಲ್ಲಿ ಸಿಎಂ ಮಾಡುತ್ತಾರೆ ಅಂತ ಹಗಲು ಕನಸು ಕಾಣುತ್ತಿದ್ದಿರಾ ಎಂದು ಪ್ರಶ್ನಿಸಿದರು. ಈ ಹಿಂದೆ ಕೃಷಿ ಸಚಿವರಾಗಿದ್ರಿ ಅಲ್ಲೂ ಏನು ಮಾಡಿಲ್ಲ. ಗಿಡದ ಮೇಲೆ ಕುಳಿತ ಕಾಗೆ ತರಹ ಕಾ ಕಾ ಅನ್ನುವುದನ್ನು ಬಿಡಿ ಕೆಲಸ ಮಾಡಿ, ಈಗ ಕಂದಾಯ ಖಾತೆ ಕೊಟ್ಟಿದ್ದಾರೆ ಜನ ನರಳುತ್ತಿದ್ದಾರೆ ಇಲಾಖೆಯ ಕೊಟ್ಟು ಕೆಲಸವನ್ನ ಮೊದಲು ಸರಿಯಾಗಿ ಮಾಡಿ, ಆಮೇಲೆ ರಾಜಕೀಯ ಹೇಳಿಕೆ ಕೊಡೋಕೆ ಬೇರೆ ವೇದಿಕೆಯಿದೆ ಎಂದು ಕಿವಿಮಾತು ಹೇಳಿದರು.

ಈ ಸುದ್ದಿಯನ್ನೂ ಓದಿ | DK Shivakumar: ಕುಮಾರಣ್ಣನ ಆಡಳಿತ ಸ್ವಂತಕ್ಕಾಗಿ, ನನ್ನ ಆಡಳಿತ ಜನರಿಗಾಗಿ: ಡಿ.ಕೆ. ಶಿವಕುಮಾರ್

ಚರ್ಚ್, ಮಸೀದಿಗಳನ್ನು ಭವ್ಯವಾಗಿ ನಿರ್ಮಾಣ ಮಾಡುತ್ತಾರೆ ಅವುಗಳಿಗೆ ಯಾರ ಕಂಟ್ರೋಲ್ ಇಲ್ಲ, ಇಂತಹ ಒಂದು ಬೋರ್ಡ್‌ ರಚನೆ ಮಾಡುವ ಅವಶ್ಯಕತೆ ಇದೆ. ವಕ್ಫ್ ಬೋರ್ಡ್ ತಿದ್ದುಪಡಿ ಅಲ್ಲ, ಕಾಯ್ದೆ ಬರಕಾಸ್ತು ಮಾಡಬೇಕು , ಹಿಂದು ದೇವಾಲಯಗಳನ್ನು ಮುಕ್ತಗೊಳಿಸಬೇಕು ಎಂದು ಗುಡುಗಿದರು.