Wednesday, 23rd October 2024

BBK 11: ಬಂದ ದಿನವೇ ಸಂಚಲನ ಸೃಷ್ಟಿಸಿದ ವೈಲ್ಡ್‌‌ ಕಾರ್ಡ್‌‌ ಸ್ಪರ್ಧಿ ಹನುಮಂತ

Hanumantha

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತಿದೆ. ಮೂರನೇ ವಾರಕ್ಕೆ ಮನೆಯಿಂದ ಜಗದೀಶ್ ಹಾಗೂ ರಂಜಿತ್ ಹೊರಹೋದರೆ, ಇದರ ಬೆನ್ನಲ್ಲೇ ವೈಲ್ಡ್ ಕಾರ್ಡ್ ಸ್ಪರ್ಧಿಯ ಎಂಟ್ರಿ ಆಗಿದೆ. ಇಷ್ಟು ವೇಗನೆ ವೈಲ್ಡ್ ಕಾರ್ಡ್ ಆಯ್ಕೆಯನ್ನು ಬಿಗ್ ಬಾಸ್ ತೆಗೆದುಕೊಳ್ಳುತ್ತಾರೆ ಎಂದು ಯಾರು ಊಹಿಸಿರಲಿಲ್ಲ. ಆದರೆ, ದಿಢೀರ್ ಇಬ್ಬರು ಸ್ಪರ್ಧಿಗಳು ಹೋದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್-15ರ ರನ್ನರ್ ಅಪ್ ಆದ ಹಾವೇರಿ ಜಿಲ್ಲೆಯ ಹನುಮಂತ ಅವರು ಬಿಗ್‌ ಬಾಸ್‌ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ ಮನೆಗೆ ಬರುತ್ತಿದ್ದಂತೆ ಹನುಮಂತ ಅವರಿಗೆ ಅದೃಷ್ಟ ಒಲಿದಿದೆ. ಮೂರನೇ ವಾರ ವೈಲ್ಡ್‌ ಕಾರ್ಡ್‌ ಆಗಿ ಬಂದ ಸ್ಪರ್ಧಿಯನ್ನೇ ಬಿಗ್​ಬಾಸ್​ ಕ್ಯಾಪ್ಟನ್ ಎಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

‘ಸರಿಗಮಪ’ ಖ್ಯಾತಿಯ ಹನುಮಂತ ಅವರು ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ. ಗಾಯನ ಹಾಗೂ ಮುಗ್ಧತೆಯಿಂದಲೇ ಫೇಮಸ್ ಆಗಿದ್ದ ಇವರು ಗ್ರಾಮೀಣ ಪ್ರದೇಶ ಜನಪದ ಹಾಡುಗಳನ್ನು ಹಾಡುತ್ತ ಎಲ್ಲರ ಪ್ರೀತಿಯನ್ನು ಗಳಿಸಿದ್ದರು. ಸಾಕಷ್ಟು ಜನಪ್ರಿಯತೆ ಸಿಕ್ಕ ಹಿನ್ನೆಲೆಯಲ್ಲಿ ನಂತರ ಜೀ ಕನ್ನಡದ ಹಲವು ಶೋಗಳಲ್ಲಿ ಅವರು ಕಾಣಿಸಿಕೊಂಡರು. ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಅಲ್ಲಿಯೂ ಹನುಮಂತ ಮಸ್ತ್​ ಡ್ಯಾನ್ಸ್​ ಮಾಡಿದ್ದರು. ಇದಾದ ಬಳಿಕ ಭರ್ಜರಿ ಬ್ಯಾಚುಲರ್ಸ್​ನಲ್ಲೂ ಮೋಡಿ ಮಾಡಿ ವೀಕ್ಷಕರನ್ನು ನಕ್ಕು ನಲಿಸಿದ್ದರು.

ಚೈತ್ರಾ ಮೇಲೆ ಸುದೀಪ್ ಗರಂ:

ವಾರದ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಹಾಗೂ ಜಗದೀಶ್ ಮಧ್ಯೆ ಕಿರಿಕ್ ಆಗಿತ್ತು. ಆಗ ಚೈತ್ರಾ ಅವರು ಯಾವನಾದ್ರು ಅಪ್ಪನಿಗೆ ಹುಟ್ಟಿದ್ರೆ ನನ್ನ ಕಣ್ಣ ಎದುರು ಬಂದು ಕೇಸ್ ಬಗ್ಗೆ ಮಾತನಾಡಲಿ ಎಂದು ಹೇಳಿದ್ದರು. ವಾರದ ಕತೆಯಲ್ಲಿ ಸುದೀಪ್ ಇದೇ ವಿಚಾರವನ್ನು ಎತ್ತಿಕೊಂಡಿದ್ದಾರೆ.

ವಾರದ ಕತೆಯಲ್ಲಿ ಸುದೀಪ್ ಇದೇ ವಿಚಾರವನ್ನು ಎತ್ತಿಕೊಂಡಿದ್ದಾರೆ. ‘ಚೈತ್ರಾ ಅವರೆ ನೀವು ಹೆಣ್ಣು ಮಕ್ಕಳ ಬಗ್ಗೆ ಮಾತನಾಡಬೇಡಿ ಎನ್ನುತ್ತೀರಿ. ಅದಕ್ಕೇ ನಾನೂ ತುಂಬ ಗೌರವಿಸುತ್ತೀನಿ. ಆದರೆ ಹೆಣ್ಣು ಮಕ್ಕಳು ಪುರಷರಿಗೆ ಗೌರವ ಕೊಡಬಾರದು ಅಂತ ಇದೆಯಾ? ನಿಮ್ಮಿಂದ ಒಂದು ಮಾತು ಬರತ್ತೆ. ಒಬ್ಬ ಅಪ್ಪನಿಗೆ ಹುಟ್ಟಿದ್ದರೆ, ಈಗ ನೀವು ಅವರ ತಾಯಿಗೆ ತಾನೆ ಬೈದ್ರಿ? ಒಬ್ಬ ಅಪ್ಪನಿಗೆ ಹುಟ್ಟಿದ್ರಿ ಅಂದರೆ ಯಾವನೂ ಅಪ್ಪನಿಗೆ ಬಯ್ಯೋದಲ್ಲ ತಾಯಿಗೆ ಬಯ್ತಾ ಇರೋದು. ಇಷ್ಟೆಲ್ಲ ಹೇಳಿಕೊಂಡು ಹೆಣ್ಣು ಮಗುವಿಗೆ ನೀವು ಗೌರವ ಕೊಡಿ ಅನ್ನುತ್ತಿದ್ದೀರಾ?’ ಎಂದು ಸುದೀಪ್ ಅವರು ಚೈತ್ರಾ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

BBK 11: ಒಬ್ಬ ಅಪ್ಪನಿಗೆ ಹುಟ್ಟಿದ್ದರೆ..: ಚೈತ್ರಾಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್