Wednesday, 23rd October 2024

Muslim personal laws : ನಾಲ್ಕು ಮದುವೆಯಾಗುವುದು ಮುಸ್ಲಿಂ ಪುರುಷರ ಹಕ್ಕು ಎಂದ ಹೈಕೋರ್ಟ್‌

Muslim personal laws

ಮುಂಬೈ: ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚು ಮದುವೆಯಾಗಿ ಮುಸ್ಲಿಂ ವೈಯಕ್ತಿಕ ಕಾನೂನಿನ (Muslim personal laws) ಅಡಿ ನೋಂದಾಯಿಸಿಕೊಳ್ಳಬಹುದು ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. ಮುಸ್ಲಿಮರ ವೈಯಕ್ತಿಕ ಕಾನೂನುಗಳು ಬಹು ವಿವಾಹಗಳನ್ನು ಅನುಮತಿಸುತ್ತವೆ ಎಂದು ಬಾಂಬೆ ಹೈಕೋರ್ಟ್ ಪೀಠವು ಹೇಳಿದೆ. ಮೂರನೇ ಪತ್ನಿಯ ಜತೆಗಿನ ಮದುವೆಯನ್ನು ನೋಂದಣಿ ಮಾಡಲು ಆಗುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಾಲಯ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಅಲ್ಜೀರಿಯಾದ ಮಹಿಳೆಯೊಂದಿಗೆ ತನ್ನ ಮೂರನೇ ಮದುವೆಯನ್ನು ನೋಂದಾಯಿಸುವಂತೆ ಕೋರಿ ಮುಸ್ಲಿಂ ವ್ಯಕ್ತಿಯೊಬ್ಬರು ಕಳೆದ ವರ್ಷ ಫೆಬ್ರವರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಸಮ್ಮತಿಸುವಂತೆ ಠಾಣೆ ಮುನ್ಸಿಪಲ್ ಕಾರ್ಪೊರೇಷನ್‌ನ ವಿವಾಹ ನೋಂದಣಿ ಕಚೇರಿಗೆ ನ್ಯಾಯಮೂರ್ತಿಗಳಾದ ಬಿ.ಪಿ.ಕೊಲಬವಾಲಾ ಮತ್ತು ಸೋಮಶೇಖರ್ ಸುಂದರೇಶನ್ ಅವರ ವಿಭಾಗೀಯ ಪೀಠವು ಅಕ್ಟೋಬರ್ 15 ರಂದು ನಿರ್ದೇಶನ ನೀಡಿದೆ.

ಮೂರನೇ ಮದುವೆಯಾಗಿರುವುದರಿಂದ ತಮ್ಮ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು. ಮದುವೆ ಪ್ರಮಾಣಪತ್ರವನ್ನು ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ದಂಪತಿ ತಮ್ಮ ಮನವಿಯಲ್ಲಿ ಕೋರಿದ್ದರು.

ಮಹಾರಾಷ್ಟ್ರ ವಿವಾಹ ಬ್ಯೂರೋ ಮತ್ತು ವಿವಾಹ ನೋಂದಣಿ ಕಾಯ್ದೆಯಡಿ ಮದುವೆಯ ವ್ಯಾಖ್ಯಾನವು ಒಂದೇ ಮದುವೆಯನ್ನು ಮಾತ್ರ ಪರಿಗಣಿಸುತ್ತದೆ. ಅನೇಕ ಸಂಬಂಧಗಳನ್ನು ಪರಿಗಣಿಸುವುದಿಲ್ಲ ಎಂಬ ಕಾರಣ ನೀಡಿ ಅಧಿಕಾರಿಗಳು ಮದುವೆಯನ್ನು ನೋಂದಾಯಿಸಲು ನಿರಾಕರಿಸಿದ್ದರು. ಪ್ರಾಧಿಕಾರದ ತನ್ನ ನಿರ್ಧಾರವನ್ನು ತಪ್ಪಾಗಿ ತೆಗೆದುಕೊಂಡಿದೆ ಎಂಬುದಾಗಿ ನ್ಯಾಯಪೀಠ ಹೇಳಿದೆ. ಕಾಯ್ದೆಯಡಿ ಮುಸ್ಲಿಂ ಪುರುಷನು ಮೂರನೇ ಮದುವೆಯನ್ನು ನೋಂದಾಯಿಸುವುದನ್ನು ತಡೆಯುವ ಅಧಿಕಾರಿಗಳು ಇಲ್ಲ ಎಂದು ಹೇಳಿದೆ.

ನಾಲ್ಕು ಹೆಂಡತಿಯರನ್ನು ಹೊಂದಬಹುದು

ಮುಸ್ಲಿಮರ ವೈಯಕ್ತಿಕ ಕಾನೂನುಗಳ ಪ್ರಕಾರ ಪುರುಷರು ಏಕಕಾಲದಲ್ಲಿ ನಾಲ್ಕು ಹೆಂಡತಿಯರನ್ನು ಹೊಂದಲು ಅರ್ಹರು. ಮಹಾರಾಷ್ಟ್ರ ವಿವಾಹ ನಿಯಂತ್ರಣ ಮತ್ತು ವಿವಾಹ ನೋಂದಣಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ, ಮುಸ್ಲಿಂ ಪುರುಷನ ಪ್ರಕರಣದಲ್ಲಿಯೂ ಸಹ ಕೇವಲ ಒಂದು ಮದುವೆಯನ್ನು ಮಾತ್ರ ನೋಂದಾಯಿಸಬಹುದು ಎಂಬ ಅಧಿಕಾರಿಗಳ ಸಲ್ಲಿಕೆಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ” ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: Prabhas Birthday : ಪ್ರಭಾಸ್‌ ಬರ್ತ್‌ಡೇಗೆ ಶುಭಾಶಯಗಳ ದಾಖಲೆ ಸೃಷ್ಟಿಸಲು ಮುಂದಾದ ಅಭಿಮಾನಿಗಳು; ಹೇಗೆ?

ಅಧಿಕಾರಿಗಳ ವಾದವನ್ನು ಒಪ್ಪಿಕೊಂಡರೆ ಮಹಾರಾಷ್ಟ್ರ ವಿವಾಹ ಬ್ಯೂರೋಗಳ ನಿಯಂತ್ರಣ ಮತ್ತು ವಿವಾಹ ನೋಂದಣಿ ಕಾಯ್ದೆಯು ಮುಸ್ಲಿಮರ ವೈಯಕ್ತಿಕ ಕಾನೂನುಗಳ ಉಲ್ಲಂಘನೆಯಾಗುತ್ತದೆ. ಮುಸ್ಲಿಮರ ವೈಯಕ್ತಿಕ ಕಾನೂನುಗಳನ್ನು ಹೊರಗಿಡಲಾಗಿದೆ ಎಂದು ಸೂಚಿಸಲು ಈ ಕಾಯ್ದೆಯಲ್ಲಿ ಅವಕಾಶ ಇಲ್ಲ ಎಂದು ನ್ಯಾಯಾಲಯ ಹೇಳಿದೆ.