Friday, 25th October 2024

MLA Pradeep Eshwar: ಮಂಚೇನಹಳ್ಳಿ ತಾಲೂಕು ವ್ಯಾಪ್ತಿಗೆ ವಿಸ್ತರಿಸಿದ ನಮ್ಮ ಶಾಸಕ ನಮ್ಮ ಊರಿಗೆ ಕಾರ್ಯಕ್ರಮ

ಶಾಸಕ ಪ್ರದೀಪ್ ಈಶ್ವರ್‌ಗೆ ಪಟಾಕಿ ಸಿಡಿಸಿ ಹೂಮಾಲೆ ಹಾಕಿ ಸಂಭ್ರಮದ ಸ್ವಾಗತಕೋರಿದ ಜನತೆ

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಬುಧವಾರ ಗೌರಿಬಿದನೂರು ತಾಲೂಕು ಮಂಚೇನಹಳ್ಳಿ ತಾಲೂಕಿನ ಬೀರಮಂಗಲ, ಚೆನ್ನಬೈರೇನಹಳ್ಳಿ, ಬಿಸಲಹಳ್ಳಿ, ಕೊಂಡೇನಹಳ್ಳಿ, ಪಿ.ನಾಗೇನಹಳ್ಳಿ, ಪುರ, ಭಕ್ತರಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ದನಿಯಾದರು.

ಶಾಸಕ ಪ್ರದೀಪ್ ಈಶ್ವರ್ ಹಮ್ಮಿಕೊಂಡಿರುವ ನಮ್ಮ ಶಾಸಕ ನಮ್ಮ ಗ್ರಾಮಕ್ಕೆ ಕಾರ್ಯಕ್ರಮ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದ್ದು ಹಳ್ಳಿಯ ಪಂಚಾಯಿತಿ ಕಟ್ಟೆಯಲ್ಲೇ ಸಮಸ್ಯೆಗಳ ಪರಿಹಾರಕ್ಕೆ ಮುನ್ನುಡಿ ಬರೆಯುತ್ತಿರು ವುದು ಜನಕ್ಕೆ ಇಷ್ಟವಾಗಿದೆ. ಇದೇ ಕಾರಣಕ್ಕೆ ಶಾಸಕರನ್ನು ಜನತೆ ಸಂತೋಷದಿಂದ ಸ್ವಾಗತಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿಗೆ ಸೇರುವ ಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರುವ 7 ಗ್ರಾಮಗಳಿಗೆ ಭೇಟಿ ಕೊಟ್ಟು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸುವ ಕೆಲಸ ಮಾಡಿದ್ದಾರೆ.

ಶಾಸಕ ಪ್ರದೀಪ್ ಈಶ್ವರ್ ಅವರ ನೂತನ ಕಾರ್ಯಕ್ರಮ ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮಕ್ಕೆ ಮನ ಸೋತಿರುವ ಜನತೆ ಈವೇಳೆ ಹೆಚ್ಚಾಗಿ ಕುಡಿಯುವ ನೀರು, ಪಡಿತರ ಚೀಟಿ ಸಮಸ್ಯೆ, ಅಕ್ರಮ ಮಧ್ಯ ಮಾರಾಟ, ರಸ್ತೆದುರಸ್ತಿ, ಬಸ್ ಸಂಪರ್ಕ ಕಲ್ಪಿಸಿ, ದರಖಾಸ್ತು ಭೂಮಿ ವಿಚಾರ, ಪಿಂಚಣಿ ವಿಚಾರ, ಗ್ಯಾರೆಂಟಿ ಯೋಜನೆಗಳ ಅನುಷ್ಟಾನದ ಲೋಪ ಇತ್ಯಾದಿಗಳನ್ನು ಪರಿಹರಿಸಲು ಶಾಸಕರನ್ನು ಕೇಳಿಕೊಳ್ಳುತ್ತಿರುವುದು ಕಂಡು ಬಂತು.

ಇದಕ್ಕೆ ಪ್ರತಿಕ್ರಯಿಸಿರುವ ಶಾಸಕ ಪ್ರದೀಪ್ ಈಶ್ವರ್ ಎರಡು ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಸಿ ಕೊಡುವುದಾಗಿ ಭರವಸೆ ಕೊಡುವ ಮೂಲಕ ನಾನು ನಿಮ್ಮವನು ನಿಮ್ಮ ಸಮಸ್ಯೆಗಳಿಗೆ ಕಣ್ಣಾಗಿ ಕೆಲಸ ಮಾಡುತ್ತೇನೆ ಎನ್ನುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಮಾರುಹೋಗುತ್ತಿದ್ದರು.

ಇದನ್ನೂ ಓದಿ: MLA Pradeep Eshwar: 10 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾದ ಶಾಸಕ ಪ್ರದೀಪ್ ಈಶ್ವರ್