Thursday, 24th October 2024

Lawyer Jagadish: ಕೇಸ್ ನಂಗೆ ಕೊಟ್ರೆ ದರ್ಶನ್‌ ಜೈಲಿಂದ ಬಿಡಿಸಿ ವಿಜಯಲಕ್ಷ್ಮಿ ಮುಂದೆ ನಿಲ್ಲಿಸುವೆ ; ಬಿಗ್‌ಬಾಸ್‌ ಜಗದೀಶ್‌

Lawyer Jagadish

ಬೆಂಗಳೂರು: ಲಾಯರ್‌ ಜಗದೀಶ್‌ ಬಿಗ್‌ಬಾಸ್‌ ಕನ್ನಡ-11ರಲ್ಲಿ ಸ್ಪರ್ಧಿಯಾಗಿ ಇತ್ತೀಚೆಗಷ್ಟೇ ಹೊರಗೆ ಬಂದಿದ್ದಾರೆ. ಈಗ ದರ್ಶನ್‌ ಜೈಲುವಾಸದ ಕುರಿತು ಮಾತನಾಡಿ ಮತ್ತೊಮ್ಮೆ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ಸುದ್ದಿವಾಹಿನಿಯೊಂದಿಗೆ ನೀಡಿರುವ ಸಂದರ್ಶನದಲ್ಲಿ ದರ್ಶನ್‌ ಪ್ರಕರಣ ಕುರಿತು ಮಾತನಾಡಿದ ಲಾಯರ್‌ ಜಗದೀಶ್‌(Lawyer Jagadish) ಹೇಳಿಕೆಯೊಂದು ಈಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ದರ್ಶನ್‌ ಪರವಾಗಿ ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಆದರೆ ಅವರ ಕುಟುಂದವರಾರು ನನ್ನ ಸಂಪರ್ಕಿಸಿಲ್ಲ. ಹೀಗಾಗಿ ಅವರನ್ನು ಬಿಡಿಸಿಕೊಂಡು ಬರಲು ಆಗುತ್ತಿಲ್ಲ. ದರ್ಶನ್‌ ಕೇಸ್‌ ನಮ್ಮ ಟೀಂಗೆ ವಹಿಸಿದ್ರೆ ದರ್ಶನ್‌ ಅವರನ್ನು ಜೈಲಿಂದ ಬಿಡಿಸಿಕೊಂಡು ಬಂದು ವಿಜಯಲಕ್ಷ್ಮಿ ಹತ್ತಿರ ಬಿಟ್ಟುಬಿಡುತ್ತೇವೆ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.

ದರ್ಶನ್‌ ಬಂಧನವಾದಾಗ ಲಾಯರ್‌ ಜಗದೀಶ್‌ ದರ್ಶನ್ ಪರವಾಗಿ ಬ್ಯಾಟ್‌ ಬೀಸಿದ್ದರು. ದರ್ಶನ್‌ ಯಾವುದೇ ತಪ್ಪು ಮಾಡಿಲ್ಲ ಅವರನ್ನು ಬಿಟ್ಟುಬಿಡಬೇಕು ಎಂದು ಧರಣಿ ಕೂಡ ಕುಳಿತುಕೊಂಡಿದ್ದರು. ನಾನು ದರ್ಶನ್‌ ಪರವಾಗಿ ಹೇಳಿಕೆ ನೀಡಿದರೂ ದರ್ಶನ್‌ ಕುಟುಂಬದವರಾರು ತನ್ನನ್ನು ಸಂಪರ್ಕಿಸಿಲ್ಲ. ಹೀಗಾಗಿ ದರ್ಶನ್‌ ಒಬ್ಬ ಶತದಡ್ಡ ಎಂದು ಲಾಯರ್‌ ಜಗದೀಶ್‌ ಹೇಳಿದ್ದಾರೆ.

ದರ್ಶನ್‌ ಪರವಾಗಿ ನನ್ನಿಂದ ಆದಷ್ಟು ಹೋರಾಟ ಮಾಡಿದ್ದೇನೆ. ಆದರೆ ಯಾರೂ ಕೂಡ ತನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ‌ ಎಂಬುದು ಜಗದೀಶ್‌ ಹೇಳಿಕೆ. ದರ್ಶನ್‌ ಬೇಗ ಹೊರಗೆ ಬಂದು ಅವರ ಕುಟುಂಬದವರನ್ನು ಸೇರಲಿ ಎಂಬುದೇ ನನ್ನ ಆಸೆ ಎಂದು ಹೇಳಿದ್ದಾರೆ.

ಜಗದೀಶ್‌ ಬಿಗ್‌ಬಾಸ್‌ ಮನೆಯಿಂದ ಹೊರಕ್ಕೆ ಬಂದ ನಂತರ ಬಿಗ್‌ಬಾಸ್‌ ಮನೆ ಒಂದು ರೀತಿ ಖಾಲಿ ಖಾಲಿ ಎನ್ನಬಹುದು. ಲಾಯರ್‌ ಜಗದೀಶ್‌ ಮತ್ತೆ ಬಿಗ್‌ಬಾಸ್‌ ಮನೆಗೆ ಬರಬೇಕು ಎಂದು ಅಭಿಮಾನಿಗಳು ಕೂಡ ಒತ್ತಾಯಿಸುತ್ತಿದ್ದರು. ಆದರೆ ಜನರನ್ನು ರಂಜಿಸಲು ಜಗದೀಶ್‌ ಅವರು ಕಲರ್ಸ್‌ ಕನ್ನಡಕ್ಕೆ ಕಾಲಿಟ್ಟಿದ್ದಾರೆ.ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಸವಿರುಚಿ ಕಾರ್ಯಕ್ರಮದಲ್ಲಿ ಸಖತ್‌ ಆಗಿ ಮಿಂಚಿದ್ದಾರೆ.

ಇದನ್ನೂ ಓದಿ: ಮೊಬೈಲ್ ಕಳ್ಳನನ್ನು ಹಿಡಿದು ತಕ್ಕ ಶಾಸ್ತಿ ಮಾಡಿದ ಮಹಿಳೆ; ವಿಡಿಯೊ ವೈರಲ್

ಸವಿರುಚಿ ಕಾರ್ಯಕ್ರಮದಲ್ಲಿ ಜಗದೀಶ್‌ ರುಚಿ ರುಚಿಯಾದ ಅಡುಗೆ ಮಾಡಿದ್ದಾರೆ. ಇದರ ಜೊತೆಗೆ ಹಂಸ ಅವರ ಪರವಾಗಿ ಮಾತನಾಡಿದ್ದಾರೆ. ನಿರೂಪಕಿ ಹಂಸ ಮೇಲೆ ನಿಮಗೆ ಲವ್‌ ಆಗಿದೆಯಾ ಎಂದು ಪ್ರಶ್ನೆ ಕೇಳಿದ್ದಕ್ಕೆ ಯಾವುದೇ ಉತ್ತರ ನೀಡದೆ ನಕ್ಕಿದ್ದಾರೆ. ಲಾಯರ್‌ ಜಗದೀಶ್‌ ಸವಿರುಚಿ ಕಾರ್ಯಕ್ರಮದ ಮೂಲಕ ಜನರಿಗೆ ಸಿಕ್ಕಾಪಟ್ಟೆ ಖುಷಿ ನೀಡಲಿದ್ದಾರಂತೆ.