Friday, 25th October 2024

Murder Case: ರೀಲ್ಸ್‌ನಲ್ಲಿ ಕರಿಮಣಿ ಮಾಲೀಕ ನೀನಲ್ಲ ಅಂದಳು, ಪ್ರಿಯಕರನ ಜತೆ ಸೇರಿ ಗಂಡನನ್ನೇ ಕೊಂದಳು!

Murder Case

ಉಡುಪಿ: ಕರಿಮಣಿ ಮಾಲೀಕ ನೀನಲ್ಲ ಅಂತ ಗಂಡನ ಜತೆ ರೀಲ್ಸ್ ಮಾಡಿದ ಮಹಿಳೆಯೊಬ್ಬಳು, ತನ್ನ ಪ್ರಿಯಕರನ ಜತೆ ಸೇರಿ ಪತಿಗೆ ವಿಷವುಣಿಸಿ ಕೊಂದಿರುವ ಘಟನೆ (Murder Case) ಜಿಲ್ಲೆಯ ಕಾರ್ಕಳದ ದೆಪ್ಪುಜೆಯಲ್ಲಿ ನಡೆದಿದೆ. ಪತಿ ಸ್ಲೋ ಪಾಯಿಸನ್‌ನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಾಲಕೃಷ್ಣ ಪೂಜಾರಿ (44) ಕೊಲೆಯಾದ ವ್ಯಕ್ತಿ. ಪತ್ನಿ ಪ್ರತಿಮಾ ಕೊಲೆ ಆರೋಪಿಯಾಗಿದ್ದಾಳೆ. ಈಕೆಗೆ ಕೆಲವು ವರ್ಷಗಳ ಹಿಂದೆ ಬಾಲಕೃಷ್ಣ ಎನ್ನುವವರ ಜತೆಗೆ ಮದುವೆಯಾಗಿತ್ತು. ಆದರೆ ಈಕೆಗೆ ಈ ಹಿಂದಿನಿಂದಲೂ ಹಿರ್ಗಾನದ ದಿಲೀಪ ಎನ್ನುವವನ ಜತೆಗೆ ಸಂಬಂಧವಿತ್ತು.

ರೀಲ್ಸ್ ಹುಚ್ಚು ಹಚ್ಚಿಕೊಂಡಿದ್ದ ಪ್ರತಿಮಾಳಿಗೆ ಗಂಡ ಹಲವು ಬಾರಿ ಎಚ್ಚರಿಕೆ ಕೂಡ ಕೊಟ್ಟಿದ್ದರು ಎನ್ನಲಾಗಿದೆ. ಈ ಮದ್ಯೆ ದಿಲೀಪ್ ಹೆಗ್ಡೆ ಜತೆಗಿರುವ ಸಂಬಂಧದ ಬಗ್ಗೆ ಗಂಡನಿಗೆ ಸಂಶಯ ಉಂಟಾಗಿತ್ತು. ಹೀಗಾಗಿ ತಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗುವ ಗಂಡನನ್ನು ಸ್ಕೆಚ್‌ ಹಾಕಿ ಹೆಂಡತಿ ಮುಗಿಸಿದ್ದಾಳೆ.

ಪ್ರಿಯಕರ ದಿಲೀಪ್ ವಿಷ ಪದಾರ್ಥವನ್ನು ಪ್ರತಿಮಾಳ ಕೈಗೆ ಕೊಟ್ಟಿದ್ದು, ಅದನ್ನು ಆಕೆ ಆಹಾರದಲ್ಲಿ ಬೆರೆಸಿ ಗಂಡನಿಗೆ ಕೊಡುತ್ತಿದ್ದಳು. ಸ್ಲೋ ಪಾಯಿಸನ್‌ನಿಂದಾಗಿ ಬಾಲಕೃಷ್ಣಗೆ ವಾಂತಿ ಭೇದಿ ಶುರುವಾಗಿದೆ. ಹೀಗಾಗಿ ಪ್ಲಾನ್ ಪ್ರಕಾರ ಬಾಲಕೃಷ್ಣನನ್ನು ಸ್ಥಳೀಯ ಅಸ್ಪತ್ರೆಗೆ ಪ್ರತಿಮಾ ದಾಖಲಿಸಿಳೆ. ಬಳಿಕ ಕಾಮಾಲೆ ರೋಗ ಇದೆ ಎಂದು ಅಲ್ಲಿಂದ ಮಣಿಪಾಲ ಅಸ್ಪತ್ರೆ, ನಂತರ ವೆನ್ಲಾಕ್ ಹಾಗೂ ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅ. 19 ರಂದು ಮನೆಗೆ ಕರೆದುಕೊಂಡು ಬಂದಿದ್ದರು. ಅ.20 ರಂದು ಬೆಳಗ್ಗೆ ತನ್ನ ಪ್ರಿಯಕರ ಜತೆ ಸೇರಿ ಬೆಡ್ ಶೀಟ್ ನಿಂದ ಉಸಿರುಗಟ್ಟಿ ಗಂಡನನ್ನು ಸಾಯಿಸಿದ್ದಾಳೆ.

ಕೃತ್ಯ ನಡೆದ ಬಳಿಕ ಬಾಲಕೃಷ್ಣ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಹೇಳಿ ಕುಟುಂಬಸ್ಥರನ್ನು ಹೆಂಡತಿ ನಂಬಿಸಿದ್ದಾಳೆ. ಆದರೆ ಬಾಲಕೃಷ್ಣ ಕುಟುಂಬಸ್ಥರಿಗೆ ಈ ಬಗ್ಗೆ ಸಂಶಯ ಮೂಡಿದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಅಸಲಿ ವಿಚಾರ ಹೊರ ಬಿದ್ದಿದ್ದು, ಸ್ಲೋ ಪಾಯಿಸನ್ ಕೊಟ್ಟು ಗಂಡನನ್ನು ಕೊಲೆ ಮಾಡಿರುವುದಾಗಿ ಹೆಂಡತಿ ಒಪ್ಪಿಕೊಂಡಿದ್ದಾಳೆ. ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ವಿರುದ್ದ ಕಾರ್ಕಳ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | BBK 11: ನನ್ನ ಮೈ ಮುಟ್ಟಬೇಡಿ, ಕಾಲು ನೆಟ್ಟಗಿದೆ: ಮತ್ತೊಮ್ಮೆ ಸದ್ದು ಮಾಡಿದ ಚೈತ್ರಾ ಕುಂದಾಪುರ ಮಾತು