Monday, 28th October 2024

BBK 11: ಮಾನಸಾ ಸೇಫ್: ಬಿಗ್ ಬಾಸ್ ಮನೆಯಿಂದ ನಾಲ್ಕನೇ ವಾರ ಯಾರು ಔಟ್?

Hamsa and Mokshitha

ಬಿಗ್ ಬಾಸ್ ಕನ್ನಡ ಸೀಸನ್ 11ನ (Bigg Boss Kannada 11) ನಾಲ್ಕನೇ ವಾರದ ವೀಕೆಂಡ್ ಕಿಚ್ಚ ಸುದೀಪ್ ಇಲ್ಲದೆ ಕೊನೆಗೊಂಡಿದೆ. ಶನಿವಾರ ಯೋಗರಾಜ್ ಭಟ್ ಬಂದು ಪಂಚಾಯಿತಿ ನಡೆಸಿದರೆ, ಭಾನುವಾರ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಬಂದಿದ್ದರು. ಜೊತೆಗೆ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆಯಿತು. ಸೃಜನ್ ಹಾಗೂ ಭಟ್ರು 7 ಮಂದಿಯನ್ನು ಮನೆಯಿಂದ ಸೇಫ್ ಮಾಡಿದರು. ಆದರೆ, ಮನೆಯಿಂದ ಹೊರಹೋಗುವ ಸ್ಪರ್ಧಿಯನ್ನು ಬಿಗ್ ಬಾಸ್ ಅಂತಿಮ ಮಾಡುತ್ತಾರೆ ಎಂದು ಹೇಳಿ ಸೃಜನ್ ನಿರ್ಗಮಿಸಿದರು.

ನಾಲ್ಕನೇ ವಾರ ದೊಡ್ಮನೆಯಿಂದ ಹೊರಹೋಗಲು ಒಟ್ಟು ಒಂಬತ್ತು ಮಂದಿ ನಾಮಿನೇಟ್ ಆಗಿದ್ದರು. ಇದರಲ್ಲಿ ಉಗ್ರಂ ಮಂಜು ಹಾಗೂ ಮಾನಸಾ ನೇರ ನಾಮಿನೇಟ್ ಆಗಿದ್ದರು. ಇವರ ಜೊತೆಗೆ ಗೋಲ್ಡ್ ಸುರೇಶ್, ಶಿಶಿರ್ ಶಾಸ್ತ್ರೀ, ಗೌತಮಿ, ಹಂಸ, ಮೋಕ್ಷಿತಾ, ಚೈತ್ರಾ ಕುಂದಾಪುರ ಹಾಗೂ ಭವ್ಯಾ ಕೂಡ ನಾಮಿನೇಟ್ ಆಗಿದ್ದರು. ಇವರಲ್ಲಿ ಮಾನಸಾ ಮನೆಯಿಂದ ಹೊರಹೋಗಲಿದ್ದರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದು ಸುಳ್ಳಾಗಿದೆ.

ಸದ್ಯ ಡೇಂಜರ್ ಝೋನ್​ನಲ್ಲಿ ಹಂಸ ಹಾಗೂ ಮೋಕ್ಷತಾ  ಇಬ್ಬರು ಸ್ಪರ್ಧಿಗಳು ಮಾತ್ರ ಇದ್ದಾರೆ. ಇವರಿಬ್ಬರಲ್ಲಿ ಯಾರು ಮನೆಗೆ ಹೋಗುತ್ತಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದು ಬರಲಿದೆ. ಇವರಿಬ್ಬರಲ್ಲಿ ಯಾರು ಎಲಿಮಿನೇಟ್ ಆಗಬಹುದು ಎಂಬ ಕುತೂಹಲ ಜೋರಾಗಿತ್ತು. ಆಗ ಮನೆಯೊಳಗೆ ಎರಡು ಕಾರುಗಳು ಬಂದವು. ಅದರಲ್ಲಿ ಒಂದು ಕಾರಿನ ಪಕ್ಕ ಹಂಸ, ಮತ್ತೊಂದು ಕಾರಿನ ಪಕ್ಕ ಮೋಕ್ಷಿತಾ ನಿಂತರು.

ಇಬ್ಬರಿಗೂ ಒಂದು ಅಧಿಕಾರ ನೀಡಿದ ಬಿಗ್ ಬಾಸ್‌ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಿ ಎಂದು ಆದೇಶಿಸಿದರು. ಆಗ ಹಂಸ ಅವರು ಹನುಮಂತ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು. “ಹನುಮಂತ ಯಾರ ಜೊತೆಗೂ ಸೇರಲ್ಲ. ಬರೀ ಧನರಾಜ್ ಜೊತೆಗೆ ಮಾತ್ರ ಇರುತ್ತಾರೆ. ಹಾಡುಗಳನ್ನು ಕೂಡ ಸರಿಯಾಗಿ ಹಾಡಲ್ಲ” ಎಂದು ಕಾರಣ ನೀಡಿದರು.

ಅತ್ತ ಮೋಕ್ಷಿತಾ ಅವರು ತ್ರಿವಿಕ್ರಮ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು. “ತ್ರಿವಿಕ್ರಮ್ ಅವರು ಗುಂಪುಗಾರಿಕೆ ಮಾಡ್ತಾರೆ..” ಎಂದು ನೇರವಾಗಿ ಆರೋಪ ಮಾಡಿದರು. ಬಳಿಕ ಇಬ್ಬರು ಕಾರಿನೊಳಗೆ ಕುಳಿತುಕೊಳ್ಳುತ್ತಾರೆ. ಕಾರುಗಳು ಗಾರ್ಡನ್ ಏರಿಯಾದಲ್ಲಿ ಒಂದಷ್ಟು ಸಮಯ ರೌಂಡ್ ಹಾಕಿ, ನಂತರ ಎಲಿಮಿನೇಟ್ ಆದ ಸ್ಪರ್ಧಿ ಇರುವ ಕಾರು ಮನೆಯಿಂದ ಆಚೆಗೆ ಹೋಗುತ್ತದೆ. ಇನ್ನೇನು ಇದು ಅಂತಿಮಗೊಳ್ಳಬೇಕು ಎಂಬೊತ್ತಿಗೆ ಭಾನುವಾರದ ಸಂಚಿಕೆಯನ್ನು ಕೊನೆಗೊಳಿಸಲಾಗಿದೆ. ಹೀಗಾಗಿ ಇಂದು ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬುದು ತಿಳಿಯಬೇಕಿದೆ.

BBK 11: ಬಿಗ್ ಬಾಸ್ ಮನೆಯಲ್ಲಿ ಹೇಗಿರಬೇಕು?: ಹನುಮಂತ ಕೊಟ್ಟ ಉತ್ತರ ನೀವೇ ನೋಡಿ