Friday, 20th September 2024

ಮಾರ್ಚ್​ 15-16ರಂದು ಮುಷ್ಕರಕ್ಕೆ ಕರೆದ ರಾಷ್ಟ್ರೀಯ ಬ್ಯಾಂಕ್​ ಒಕ್ಕೂಟ

ನವದೆಹಲಿ: ನೀತಿ ವಿರೋಧಿಸಿ ಬ್ಯಾಂಕ್​ ಒಕ್ಕೂಟಗಳು ಎರಡು ದಿನದ ಮುಷ್ಕರಕ್ಕೆ ಕರೆ ನೀಡಿದ್ದು ಇದರಿಂದಾಗಿ ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆನರಾ ಬ್ಯಾಂಕ್​ ಹೇಳಿದೆ. ರಾಷ್ಟ್ರೀಯ ಬ್ಯಾಂಕ್​ ಒಕ್ಕೂಟ ಮಾರ್ಚ್​ 15-16ರಂದು ಮುಷ್ಕರಕ್ಕೆ ಕರೆ ನೀಡಿವೆ.

ಮಾ.5 ಹಾಗೂ 16ರಂದು ಭಾರತೀಯ ಬ್ಯಾಂಕ್​ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿದೆ. ಮುಷ್ಕರದ ದಿನಗಳಲ್ಲಿ ಬ್ಯಾಂಕ್​ ಶಾಖೆಗಳಲ್ಲಿ ಕಾರ್ಯನಿರ್ವಹಣೆಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ತಿದೆ ಎಂದು ಕೆನರಾ ಬ್ಯಾಂಕ್​ ತಿಳಿಸಿದೆ. ಆದರೆ ಮುಷ್ಕರ ಕಾರ್ಯರೂಪಕ್ಕೆ ಬಂದಲ್ಲಿ ಅದು ಶಾಖೆಗಳು ಹಾಗೂ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ.