Thursday, 19th September 2024

ರಾಜ್ಯದಲ್ಲಿಲ್ಲ ಲಾಕ್‍‍ಡೌನ್‍, ನೈಟ್ ಕರ್ಫ್ಯೂ: ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಪ್ರಕರಣಗಳು ಹೆಚ್ಚಳವಾಗಿರುವ ಕುರಿತಂತೆ ಸೋಮವಾರ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ರಾಜ್ಯದಲ್ಲಿ ಲಾಕ್‌ಡೌನ್‌ ಹಾಗೂ ನೈಟ್‌ ಕರ್ಫ್ಯೂ ಇಲ್ಲ ಎಂದು ಹೇಳಿದ್ದಾರೆ.

ಒಂದು ವೇಳೆ ಸಾರ್ವಜನಿಕರು ಮಾಸ್ಕ್ ಧರಿಸದಿದ್ದರೆ ಮತ್ತೆ ಹಿಂದಿನಂತೆ ದಂಡ ಹೇರಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪನವರು, ಈ ಕೆಳಕಂಡ ಅಂಶಗಳನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ. ಹಾಗೂ ಸಾರ್ವಜನಿಕರು ಈ ಕುರಿತು ಇನ್ನೂ ಹೆಚ್ಚಿನ ನಿಗಾ ವಹಿಸಬೇಕೆಂದು ಕೂಡ ತಿಳಿಸಿದ್ದಾರೆ.

ಮಹತ್ವದ ಅಂಶಗಳು

ಮತ್ತೆ ಕೋವಿಡ್‍ ಕೇರ್‌ ಸೆಂಟರ್‌‌‌ ಸ್ಥಾಪನೆಗೆ ಸಿದ್ದತೆ

ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಾಗಿದೆ,.
ರಾಜ್ಯದಲ್ಲಿ ಟೆಸ್ಟಿಂಗ್‍ ಪ್ರಮಾಣ ಹೆಚ್ಚಳ
ರಾಜ್ಯದಲ್ಲಿ ಸದ್ಯಕ್ಕೆ ಲಾಕ್‍‍ಡೌನ್‍ ಇಲ್ಲ
ನೈಟ್ ಕರ್ಫ್ಯೂ ಇಲ್ಲ
ಲಸಿಕೆ ಪ್ರಮಾಣ ಹೆಚ್ಚಿಸಲು ತಜ್ಞರ ಸಲಹೆ
ಮದುವೆ ಸಮಾರಂಭಗಳಲ್ಲಿ 500 ಮಂದಿಗಷ್ಟೇ ಅವಕಾಶ
ರಾಜ್ಯದಲ್ಲಿ ಲಾಕ್‍ಡೌನ್‍ ಆಗಬಾರದೆಂದರೆ ನಿಯಮ ಪಾಲಿಸಿ
ಬಸ್ಸುಗಳಲ್ಲಿ ನಿಯಮಿತ ಜನ ಸಂಚಾರಕ್ಕೆ ಸೂಚನೆ
ಮಹಾರಾಷ್ಟ್ರ, ಕೇರಳದಿಂದ ಬರುವವರ ಮೇಲೆ ನಿಗಾ