Thursday, 19th September 2024

ಜು.22 ರಂದು ಸಂಸತ್ತಿನ ಹೊರಗೆ ಪ್ರತಿಭಟನೆ: ರಾಕೇಶ್ ಟಿಕೈಟ್

ನವದೆಹಲಿ: ರೈತರು ಜು.22 ರಂದು ಸಂಸತ್ತಿನ ಹೊರಗೆ ಮತ್ತೊಂದು ಪ್ರತಿಭಟನೆ ನಡೆಸಲು ಯೋಜಿಸುತ್ತಿದ್ದಾರೆ. ಭಾರತೀಯ ಕೇಂದ್ರ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕೈಟ್, ಮಂಗಳವಾರ ಕೇಂದ್ರ ಮಾತುಕತೆಗೆ ಸಿದ್ದವಿಲ್ಲ‌. ಅದಕ್ಕೆ ರೈತರ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದರು.

‘ರೈತರ ಪ್ರತಿಭಟನೆ ಮುಂದುವರಿಯುತ್ತದೆ. ಕೇಂದ್ರವು ಮಾತುಕತೆಗೆ ಸಿದ್ಧರಿಲ್ಲ. ನಾವು ಜು.22 ರಂದು ದೆಹಲಿಗೆ ಹೋಗಿ ಸಂಸತ್ತಿನ ಹೊರಗೆ ಕುಳಿತುಕೊಳ್ಳು ತ್ತೇವೆ. ಪ್ರತಿದಿನ 200 ಜನರು ಹೋಗುತ್ತಾರೆ’ ಎಂದು ಟಿಕೈಟ್ ಹೇಳಿದರು. ಮತ್ತೊಂದೆಡೆ, ಮಾನ್ಸೂನ್ ಅಧಿವೇಶನದಲ್ಲಿ ಸಂಸತ್ ಭವನದ ಹೊರಗೆ ಯೋಜಿತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪಂಜಾಬ್‌ನ ವಿವಿಧ ಭಾಗಗಳ ರೈತರು ದೆಹಲಿಯತ್ತ ತಮ್ಮ ಪ್ರಯಾಣ ಪ್ರಾರಂಭಿಸಿದ್ದಾರೆ ಎಂದು ಸೋಮಿಯುಕ್ತ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಹೇಳಿದೆ.

ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಪ್ರತಿಭಟನೆ ನಡೆಸುವ ಯೋಜನೆಯನ್ನು ನಾವು ಈಗಾಗಲೇ ಘೋಷಿಸಿದ್ದೇವೆ. ರೈತರ ಹಕ್ಕುಗಳಿಗಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಲು ಜು.17 ರೊಳಗೆ ವಿರೋಧ ಪಕ್ಷಗಳಿಗೆ ಎಚ್ಚರಿಕೆ ಪತ್ರ ಕಳುಹಿಸುವ ಉದ್ದೇಶವನ್ನು ಪುನರುಚ್ಚರಿಸಿತು.’ಜುಲೈ 22 ರಿಂದ ಅಧಿವೇಶನ ಮುಗಿಯುವವರೆಗೆ ಪ್ರತಿದಿನ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ, ಪ್ರತಿ ರೈತ ಸಂಘಟನೆಯ ಐದು ಸದಸ್ಯರು, ಕನಿಷ್ಠ 200 ರೈತರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಎಸ್ಕೆಎಂ ಹೇಳಿದೆ.

Leave a Reply

Your email address will not be published. Required fields are marked *