Friday, 20th September 2024

ರಾಜ್ಯಸಭೆ ಕಲಾಪ ಮುಂದೂಡಿಕೆ

ನವದೆಹಲಿ: ಕೇಂದ್ರ ಬಜೆಟ್ ಅಧಿವೇಶನದ ಎರಡನೇ ಭಾಗ ಮಾರ್ಚ್ 14ರಂದು ಆರಂಭವಾಗಲಿದೆ. ಅಲ್ಲಿಯವರೆಗೆ ರಾಜ್ಯಸಭೆ ಕಲಾಪ ಮುಂದೂಡಿಕೆಯಾಗಿದೆ.

ಕೇಂದ್ರ ಬಜೆಟ್-2022-23ಕ್ಕೆ ಸಂಬಂಧಪಟ್ಟಂತೆ ರಾಜ್ಯಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ ಬಳಿಕ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಸದನದ ಕಲಾಪ ಮುಂದೂಡಿದರು.

17ನೇ ಲೋಕಸಭೆಯ 8ನೇ ಅಧಿವೇಶನ ಜನವರಿ 31ರಂದು ಆರಂಭವಾಗಿದ್ದು ಫೆ.1ರಂದು ಕೇಂದ್ರ ಬಜೆಟ್-2022ನ್ನು ಮಂಡಿಸಿದ್ದರು. ಬಜೆಟ್ ಅಧಿವೇಶನದ ಎರಡನೇ ಭಾಗ ಮಾರ್ಚ್ 14ರಂದು ಆರಂಭವಾಗಿ ಏಪ್ರಿಲ್ 8ರಂದು ಮುಕ್ತಾಯಗೊಳ್ಳಲಿದೆ.

ಮಾರ್ಚ್ 3ಕ್ಕೆ ಭಾದ್ಯತಾ ಸಮಿತಿ ಸಭೆ: ರಾಜ್ಯ ಸಭೆಯ ಹಕ್ಕು ಭಾದ್ಯತಾ ಸಮಿತಿ ಸಭೆ ಮಾರ್ಚ್ 3ರಂದು ನಡೆಯಲಿದೆ.