Sunday, 8th September 2024

ಕೆ.ಸಿ.ಆರ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಕೆಸಿಆರ್ ಅವರು ಪ್ರಧಾನಿಗೆ ಧನ್ಯವಾದ ಅರ್ಪಿಸಿದರು. “ಬೇರೆ ಯಾವುದನ್ನೂ ಚರ್ಚಿಸಲಾಗಿಲ್ಲ” ಎಂದು ಮುಖ್ಯ ಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.

ಫೆ.5 ರಂದು ಹೈದರಾಬಾದ್‌ಗೆ ಸಂತ ರಾಮಾನುಜಾಚಾರ್ಯರ ಪ್ರತಿಮೆ ಉದ್ಘಾಟಿಸಲು ಪ್ರಧಾನಿ ಬಂದಾಗ ಕೆಸಿಆರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗುವುದನ್ನು ಅಥವಾ ಸ್ವಾಗತಿಸುವುದನ್ನು ತಪ್ಪಿಸಿದ ನಂತರ ಮೊದಲ ಸಂವಾದವಾಗಿದೆ. ಮುಖ್ಯಮಂತ್ರಿ ಕೆಸಿಆರ್ ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿ ಮೋದಿ ಭೇಟಿ ನಿರಾಕರಿಸಿದ್ದರು.

ಕೆಸಿಆರ್ ಅವರು ಪ್ರಧಾನಿ ಮತ್ತು ಬಿಜೆಪಿ ಸರಕಾರವನ್ನು ಹಲವು ಬಾರಿ ಟೀಕಿಸಿದ್ದಾರೆ. ಬಿಜೆಪಿಯನ್ನು ಬಂಗಾಳ ಕೊಲ್ಲಿಗೆ ಎಸೆಯಿರಿ ಎಂದು ಜನರಿಗೆ ಕರೆ ನೀಡಿದ್ದರು.

ಪ್ರಧಾನಿ ಅವರು “ಚುನಾವಣೆಗಾಗಿ ಉಡುಗೆ ತೊಟ್ಟಿದ್ದಾರೆ” ಎಂದು ಕೆಸಿಆರ್ ಇತ್ತೀಚೆಗೆ ಟೀಕಿಸಿದ್ದರು.

error: Content is protected !!