Saturday, 26th October 2024

ಲಾಕ್‌ಡೌನ್: ಪಾಸ್‌ಗಳ ದುರ್ಬಳಕೆಗೆ ಆಯುಕ್ತರ ಬೇಸರ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಲಾಕ್ ಡೌನ್ ವೇಳೆಯಲ್ಲಿ ಜನರಿಗೆ ಹಾಗೂ ಅಗತ್ಯ ಸೇವೆ ಪೂರೈಕೆ ಮಾಡುವವರಿಗೆ ಡಿಸಿಪಿ ಕಚೇರಿಗಳಲ್ಲಿ ನೀಡಲಾಗುತಿದ್ದ ಸಾಮಾನ್ಯ ಪಾಸ್ ಗಳು ಸದ್ಯ ದುರ್ಬಳಕೆ ಆಗುತ್ತದೆ ಎಂದು ನಗರ ಆಯುಕ್ತ ಭಾಸ್ಕರ್ ರಾವ್ ಬೇಸರ‌ ವ್ಯಕ್ತ ಪಡಿಸಿದ್ದಾರೆ.
 ಅನಿವಾರ್ಯ ಕಾರಣಕ್ಕೆ ಓಡಾಡುವುದಕ್ಕೆ ಪಾಸ್‌ಗಳನ್ನು  ನೀಡಲಾಗಿತ್ತು. ಆದರೆ, ಮಾಧ್ಯಮದವರ ಹೆಸರನ್ನು ಹೇಳಿಕೊಂಡು ಕೆಲವರು ವಿನಾಃ‌ಕಾರಣ ಓಡಾಟ ಮಾಡುತ್ತಿದ್ದಾರೆ. ನಾವು ಮಾಧ್ಯಮದವರಿಗೆ ಐಡಿ ಕಾರ್ಡ್ ಇದರೆ ಸಾಕು ಎಂದಿದ್ದೇವೆ. ಆದರೆ, ಅದನ್ನು ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ. ನಾವು ಲಾಠಿನೂ ಕೂಡ ಉಪಯೋಗಿಸುತ್ತಿಲ್ಲ. ತುಂಬಾ ತಾಳ್ಮೆಯಿಂದ ಕೆಲಸ ಮಾಡುತ್ತಿದ್ದೇವೆ . ಹೀಗಾಗಿ ನಮ್ಮ ತಾಳ್ಮೆಗೂ ಒಂದು ಮಿತಿ ಇದೆ ಎಂದರು.
ಅನವಶ್ಯಕವಾಗಿ ತೆರಳುತ್ತಿರುವವರ ವಾಹನಗಳನ್ನ ವಶಕ್ಕೆ ಪಡೆಯಲು ನಿರ್ಧಾರ ಮಾಡಿದ್ದು, ಸದ್ಯ 5,371 ವಾಹನಗಳನ್ನ ವಶಕ್ಕೆ ಪಡೆದಿದ್ದೇವೆ. ಈಗಾಗಲೆ ಏಳು ದಿನ ಲಾಕ್ ಡೌನ್ ಆಗಿದೆ. ಲಾಠಿ ಬಿಟ್ಟು ಕೆಲಸ ಮಾಡುತ್ತಿದ್ದೇವೆ. ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ದೆಹಲಿಯ‌ ಜಮಾತ್ಗೆ ಹೋಗಿ ಬಂದವರ ಕುರಿತು ಮಾತನಾಡಿದ ಅವರು, ಈಗಾಗಲೇ ಸಿಲಿಕಾನ್ ಸಿಟಿಯಲ್ಲಿರುವವರ ಬಗ್ಗೆ ಲಿಸ್ಟ್ ಮಾಡಿ ಆಯಾ ವಿಭಾಗ ಪೊಲಿಸರು ಅವರ ಬಳಿ ಹೋಗಿ ಹೋಂ ಕ್ವಾರಂಟೈನ್ ಅಥವಾ ಸರಕಾರಿ ಕ್ವಾರಂಟೈನ್ ನಲ್ಲಿ ಇರಲು ಹೇಳಿದ್ದಾರೆ. ಜಮಾತ್ಗೆ ಹೋದವರನ್ನ ಯಾರನ್ನೂ ಬಂಧಿಸಿಲ್ಲ‌. ನಾವೇನು ಮನೆಗೆ ಹೆದರಿಸೋಕೆ ಹೋಗುತ್ತಿಲ್ಲ, ಕೇಸು ಹಾಕುವುದಿಲ್ಲ ಎಂದರು.