Saturday, 26th October 2024

ಅಪರಾಧ ಪ್ರಕರಣ ಇಳಿಮುಖ: ಪೊಲೀಸರಿಂದ ಆರೋಗ್ಯ ಸೇವೆ

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು:

ರಾಜಧಾನಿಯಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯಾದ ಕಾರಣ, ಹೊಯ್ಸಳ ಸಿಬ್ಬಂದಿ ಹೆಲ್ತ್​ ಸರ್ವಿಸ್​ ಮಾಡುತ್ತಾರೆಂದು ನಗರ ಪೊಲೀಸ್​ ಆಯುಕ್ತ ಭಾಸ್ಕರ್ ​ರಾವ್​ ತಿಳಿಸಿದ್ದಾರೆ.

ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕಾಗಿ ಬೆಂಗಳೂರು ನಗರದ ಪ್ರತಿ ಪೊಲೀಸ್ ಠಾಣೆಯಲ್ಲಿ ಮೂರು ಹೊಯ್ಸಳ ವಾಹನಗಳಿವೆ. ಆದರೆ, ಮಾರ್ಚ್ 1 ರಿಂದ 15ನೇ ತಾರೀಖಿನವರೆಗೂ 2,240 ಪ್ರಕರಣ ಪತ್ತೆಯಾಗಿದ್ದವು. ಆದರೆ, ಮಾರ್ಚ್ 16 ರಿಂದ 31 ರವೆರಗೂ 1312 ಪ್ರಕರಣ ಪತ್ತೆಯಾಗಿದೆ. ಕಳೆದ ಎರಡು ವರ್ಷಗಳಿಗೆ ಹೊಲಿಸುವುದಾದರೆ ಅಪರಾಧಗಳು ಬಹಳ ಕಡಿಮೆಯಾಗಿವೆ.

ಹೀಗಾಗಿ ಆಯಾ ಠಾಣೆಯ ಹೊಯ್ಸಳ ಸಿಬ್ಬಂದಿ ಮೂರು ಶಿಪ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಮೂರು ದಿನಗಳಿಂದ ಕೀಮೊಥೆರಪಿ, ಡಯಾಲಿಸಿಸ್, ಹಾರ್ಟ್ ಡಿಸೀಸ್ ಇಂಥವರಿಗೆ ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ. 100 ಕ್ಕೆ ಕರೆ ಮಾಡಿದರೆ ಸಾಕು ಎಷ್ಟೇ ದೂರವಿರಲಿ ಅವರನ್ನ ಅವರು ಹೇಳಿದ ಆಸ್ಪತ್ರೆಗೆ ಬಿಡುವ ಕೆಲಸ ಮಾಡಲಾಗುತ್ತಿದೆ.

ಕರೋನಾ ಸಂಬಂಧಿಸಿದ ಕೇಸ್​ಗೆ ಬೇರೆ ಆಂಬುಲೆನ್ಸ್ ಬಳಸಲಾಗಿದೆ. ಈಗ ವಯೋವೃದ್ಧರು ಮತ್ತು ಅನಾರೋಗ್ಯ ಇರುವವರ ಸಹಾಯಕ್ಕೆ ಹೊಯ್ಸಳ ಬಳಸಲು ಸೂಚಿಸಿದ್ದೇನೆ. ಹೆಚ್ಚಿನ‌ ಕರೆಗಳು ಬರ್ತಿದ್ದು, ಎಲ್ಲರಿಗೂ ಸ್ಪಂದಿಸುತ್ತಿದ್ದೇವೆ. ಪೊಲೀಸ್ ಇಲಾಖೆಯಿಂದ ಕರೋನಾಕ್ಕಾಗಿ ಸಹಾಯ ಆಗಲಿ ಅನ್ನೋದೆ ನಮ್ಮ ಇಚ್ಚೆ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.