Saturday, 21st September 2024

‘ಅಸಾನಿ’: ಉತ್ತರ ಆಂಧ್ರಪ್ರದೇಶ, ಕರಾವಳಿ ಒಡಿಶಾದಲ್ಲಿ ಭಾರೀ ಮಳೆ ಸಾಧ್ಯತೆ

ನವದೆಹಲಿ: ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದೆ. ಕಳೆದ 6 ಗಂಟೆಗಳಲ್ಲಿ 16 ಕಿಮೀ ವೇಗದಲ್ಲಿ ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸಿದ್ದು, ಚಂಡಮಾರುತ ‘ಅಸಾನಿ’ ಆಗಿ ತೀವ್ರ ಗೊಂಡಿದೆ ಎಂದು ವರದಿಯಾಗಿದೆ.

ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಭಾನುವಾರ ಕಾರ್ ನಿಕೋಬಾರ್‌ನಿಂದ ಸುಮಾರು 450 ಕಿಮೀ ಪಶ್ಚಿಮ-ವಾಯುವ್ಯಕ್ಕೆ (ನಿಕೋಬಾರ್ ದ್ವೀಪಗಳು), ಪೋರ್ಟ್ ಬ್ಲೇರ್‌ನಿಂದ 380 ಕಿಮೀ ಪಶ್ಚಿಮಕ್ಕೆ (ಅಂಡಮಾನ್ ದ್ವೀಪಗಳು), ವಿಶಾಖಪಟ್ಟಣದಿಂದ 970 ಕಿಮೀ ಆಗ್ನೇಯ (ಆಂಧ್ರಪ್ರದೇಶ) ಮತ್ತು 1030 ಕಿಮೀ. ಪುರಿಯ ದಕ್ಷಿಣ-ಆಗ್ನೇಯ (ಒಡಿಶಾ) ಚಂಡಮಾರುತ ಕೇಂದ್ರೀಕರಿಸಿದೆ.

ಮುಂದಿನ 24 ಗಂಟೆಗಳಲ್ಲಿ ಪೂರ್ವ ಮಧ್ಯ ಬಂಗಾಳ ಕೊಲ್ಲಿಯಲ್ಲಿ ತೀವ್ರವಾದ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯಿಂದ ಪಶ್ಚಿಮ-ಮಧ್ಯ ಮತ್ತು ಪಕ್ಕದ ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ತೀವ್ರ ಚಂಡಮಾರುತದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಚಂಡಮಾರುತವು ರಾಜ್ಯದ ಕರಾವಳಿಗೆ ಅಪ್ಪಳಿಸುವುದಿಲ್ಲ ಎಂಬ ಮಾಹಿತಿ ಪಡೆದ ನಂತರವೂ ಭದ್ರತಾಪಡೆಗಳನ್ನು ತೀವ್ರ ಕಟ್ಟೆಚ್ಚರವಹಿಸುವಂತೆ ನಿಯೋಜಿಸಲಾಗಿದೆ. ಅಗತ್ಯವಿದ್ದರೆ 7.5 ಲಕ್ಷ ಜನರನ್ನು ಸ್ಥಳಾಂತರಿಸಲು ರಾಜ್ಯವು ಸಿದ್ಧವಾಗಿದೆ ಎಂದು ವಿಶೇಷ ಪರಿಹಾರ ಆಯುಕ್ತ ಜೆನಾ ಹೇಳಿದ್ದಾರೆ.