Saturday, 26th October 2024

ದಿ.ರಾಜೀವ ಗಾಂಧಿ ೩೧ ಪುಣ್ಯಸ್ಮರಣೆ ಆಚರಣೆ

ಚಿಕ್ಕನಾಯಕನಹಳ್ಳಿ: ಕಾಂಗ್ರೆಸ್ ಮುಖಂಡರು ದಿ.ರಾಜೀವ ಗಾಂಧಿ ಅವರ ೩೧ ಪುಣ್ಯ ಸ್ಮರಣೆಯನ್ನು ಪಟ್ಟಣದಲ್ಲಿರುವ ಕಾಂಗ್ರೆಸ್ ಭವನದಲ್ಲಿ ಆಚರಿಸಿದರು. ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಸಾಮಾಜಿಕ ಜಾಲತಾಣದ ಕಾರ್ಯಧ್ಯಕ್ಷ ವೇಣುಗೋಪಾಲ್ ರಾಷ್ಟçಕ್ಕಾಗಿ ಬಲಿದಾನಗೈದ ರಾಜೀವ್ ಗಾಂಧಿ ಅವರ ತ್ಯಾಗ ಶ್ರೇಷ್ಠವಾದುದು, ಅವರ ದೂರದೃಷ್ಟಿ ಆಡಳಿತದಿಂದ ರಾಷ್ಟçದ ಗೌರವ ಹೆಚ್ಚಿದೆ, ದೇಶದಲ್ಲಿ ೧೮ ವಯಸ್ಸಿನವರಿಗೆ ಮತದಾನದ ಹಕ್ಕನ್ನು ನೀಡಿದರು. ಜೊತೆಗೆ ಆಧುನಿಕ ಭಾರತದ ನಿರ್ಮಾಣಕ್ಕೆ ಬುನಾದಿ ಹಾಕಿದರು. ಹೀಗಾಗಿ ಅವರ ಪ್ರತಿಯೊಂದು ಕಾರ್ಯಗಳು ಅನನ್ಯವಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್‌ನ ಉಪಾಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ರಾಜೀವ್ ಗಾಂಧಿ ಕಿರಿಯ ವಯಸ್ಸಿನಲ್ಲಿ ಪ್ರಧಾನಿಯಾಗಿ ಕಿರಿಯ ವಯಸ್ಸಿನಲ್ಲೇ ಮೃತರಾದರು. ಇದರಿಂದ ದೇಶಕ್ಕೆ ನಷ್ಟವಾಯಿತು. ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಕಾರಿ ಬೆಳವಣಿಗೆ ತಂದು ಕೋಟ್ಯಂತರ ಜನರಿಗೆ ಉದ್ಯೋಗ ಸೃಷ್ಟಿಸಲಾಯಿತು. ಇಂದಿನ ದುರಾದೃಷ್ಟವೆಂದರೆ ಇಷ್ಟು ಪ್ರಧಾನಿಗಳು ಕಟ್ಟಿ ಬೆಳಸಿದ ಸಂಸ್ಥೆಗಳನ್ನು ಮಾರಾಟ ಮಾಡಲು ಈಗಿನ ಪ್ರಧಾನಿಗಳು ಸಿದ್ದತೆ ಆರಂಭಿಸಿದ್ದಾರೆ ಎಂದು ಕುಟುಕಿದರು.

ಪುಣ್ಯ ಸ್ಮರಣೆಯಲ್ಲಿ ಮಾಜಿ ಶಾಸಕ ಲಕ್ಕಪ್ಪ, ಕಾರ್ಯದರ್ಶಿ ಬ್ರಹ್ಮಾನಂದ್, ವಕ್ತಾರ ಕೃಷ್ಣೇಗೌಡ ಮುಖಂಡರಾದ ಶಿವಕುಮಾರ್, ಗಂಗಾಧರ್, ಬೀರೇಶ್, ಪರಮೇಶ್, ಸೂರಿ, ತಿಲಕ್, ವೇಣುಗೋಪಾಲ್, ರೇಣುಕಸ್ವಾಮಿ, ವೀರೇಶ್, ಭಾಗವಹಿಸಿದ್ದರು.