Saturday, 26th October 2024

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಆಚರಣೆಗೆ ನಿರ್ಧಾರ – ದತ್ತಾತ್ರೇಯ ಪಾಟೀಲ ರೇವೂರ

ಗ್ರಾಮ ಮಟ್ಟದಿಂದ ವಿಭಾಗ ಮಟ್ಟದವರೆಗೂ ವಿವಿಧ ಕಾರ್ಯಕ್ರಮ ಆಯೋಜನೆ

ಕಲಬುರಗಿ: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕಲಬುರಗಿಯಲ್ಲಿ ಹೈದ್ರಾಬಾದ್‌ ಕರ್ನಾಟಕಕ್ಕೆ ಸ್ವಾತಂತ್ರ ದೊರೆತು 74 ವರ್ಷ ದಾಟಿ 75 ವರ್ಷ ಕಾಲಿಡುತ್ತಿರುವ ಹಿನ್ನೆಲೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯೊತ್ಸವದ ಅಮೃತ ಮಹೋತ್ಸವವನ್ನು ಆ.15ರಿಂದ ಸೆ.17ರವರೆಗೆ ಆಚರಣೆ ಮಾಡಲಾಗುವುದು ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಶಾಸಕ ದತ್ತಾತ್ರೇಯ ಪಾಟೀಲ್‌ ಮಾಹಿತಿ ನೀಡಿದರು.

ನಗರದ ಕೆಕೆಆರ್‌ಡಿಬಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಂತ್ರಿಗಳು ಹಾಗೂ ಕೇಂದ್ರದ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ರೂಪರೇಷ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿಸುಮಾರು 1 ಲಕ್ಷ ಜನರು ಸೇರಿಸಲಗುತ್ತಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕದ ಗ್ರಾಮ, ತಾಲೂಕು, ಜಿಲ್ಲೆ ಹಾಗೂ ವಿಭಾಗವಾರು ಕ್ರೀಡೆ, ಪ್ರಬಂಧ ರೀತಿಯ ಸ್ಪರ್ಧೆ ಹಾಗೂ ಆರೋಗ್ಯ ಮೇಳ ಆಯೋಜಿಸಲಾಗುತ್ತಿದೆ. ಎಲ್ಲಜಿಲ್ಲೆಗಳಿಂದ ಕಾರ್ಯಕ್ರಮ ಆಯೋಜನೆಗೆ ಬಗ್ಗೆ ಪ್ರಸ್ತಾವನೆ ಪಡೆದು ಅದಕ್ಕನುಗುಣವಾಗಿ ಅನುದಾನ ಸಹ ಬಿಡುಗಡೆ ಮಾಡಲಾಗುವುದು. ಇದಕ್ಕಾಗಿ ಡಿಡಿಪಿಐ, ಆರೋಗ್ಯ, ಕ್ರೀಡಾ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ಕೇಂದ್ರ ಸರಕಾರವು ಹರ್‌ ಘರ್‌ ತಿರಂಗಾ ಅಭಿಯಾನ ಆ.11 ರಿಂದ 17ರ ವರೆಗೆ ಹಮ್ಮಿಕೊಂಡಿದ್ದು, ಕಲ್ಯಾಣ ಕರ್ನಾಟಕ ಭಾಗ ದಲ್ಲಿಈ ಅಭಿಯಾನ ಸೆ.17ರ ವರೆಗೆ ಮುಂದುವರೆಸುವ ಕುರಿತಂತೆಯೂ ಸಿಎಂ ಅವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ಗುಲಬರ್ಗಾ ವಿವಿ ಆವರಣದಲ್ಲಿ60 ಎಕರೆ ಪ್ರದೇಶದಲ್ಲಿಕ್ರೀಡಾ ಮತ್ತು ಸಾಂಸ್ಕೃತಿಕ ಸಮುಚ್ಚಯ, ಕಣ್ಣಿ ಮಾರುಕಟ್ಟೆಯಲ್ಲಿ ತರಕಾರಿ ಮಾರುಕಟ್ಟೆ, ಸೇಡಂ ರಸ್ತೆಯಲ್ಲಿಫ್ಲೈ ಓವರ್‌ ರಸ್ತೆ ನಿರ್ಮಿಸಲಾಗುತ್ತಿದೆ. ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲೆಂದು ಬೆಂಗಳೂರಿನ ಹೆಚ್‌ಎಸ್‌ಆರ್‌ ಲೇ ಔಟ್‌ನಲ್ಲಿ59 ಕೋಟಿ ರೂ. ವೆಚ್ಚದಲ್ಲಿವಸತಿ ನಿಲಯ ಸ್ಥಾಪಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ್‌ ಇದ್ದರು.

ಅನುದಾನ ಹಂಚಿಕೆಯಲ್ಲಿತಾರತಮ್ಯ ಇಲ್ಲ
ಕೆಕೆಆರ್‌ಡಿಬಿ ಅನುದಾನ ಹಂಚಿಕೆಯಲ್ಲಿಯಾವುದೇ ರೀತಿಯ ತಾರತಮ್ಮ ಮಾಡಲಾಗುತ್ತಿಲ್ಲ. ಡಾ.ಡಿ.ಎಂ.ನಂಜುಂಡಪ್ಪ ಅವರ ವರದಿಯಂತೆ ಆಯಾ ಕ್ಷೇತ್ರಕ್ಕೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ದತ್ತಾತ್ರೇಯ ಪಾಟೀಲ್‌ ರೇವೂರು ಹೇಳಿದರು. ಮಂಡಳಿಯಿಂದ ಯಾವುದೇ ಕಾಮಗಾರಿಗೆ ನೇರವಾಗಿ ಟೆಂಡರ್‌ ಕರೆದಿರುವುದಿಲ್ಲ. ಇಲ್ಲಿತಾರತಮ್ಯದ ಪ್ರಶ್ನೆಯೆ ಉದ್ಭವಿಸುವು ದಿಲ್ಲ ಎಂದ ಅವರು ಕಲಬುರಗಿ ವಿಮಾನ ನಿಲ್ದಾಣಕ್ಕೆ, ಜಯದೇವ ಹೃದ್ರೋಗ ಆಸ್ಪತ್ರೆಗೆ, ರಾಯಚೂರು ವಿಮಾನ ನಿಲ್ದಾಣಕ್ಕೆ ಮಂಡಳಿಯಿಂದ ನೀಡಲಾದ ಅನುದಾನ ಒಂದು ಕ್ಷೇತ್ರಕ್ಕೆ ಸೀಮಿತವಾಗದು, ಅದು ಜಿಲ್ಲೆ, ಪ್ರದೇಶಕ್ಕೆ ಸೀಮಿತವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಶೇ.97ರಷ್ಟು ಅನುದಾನ ಖರ್ಚು
ಮಂಡಳಿಗೆ 2013ರಿಂದ ಇಲ್ಲಿಯವರೆಗೆ ಬಿಡುಗಡೆಯಾದ 7,328 ಕೋಟಿ ರೂ. ಮೊತ್ತದಲ್ಲಿ7,107 ಕೋಟಿ ರೂ. ಖರ್ಚು ಮಾಡುವ ಮೂಲಕ ಶೇ.97ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದ ಅವರು, ಆರ್ಥಿಕ ವರ್ಷದ ಏಪ್ರಿಲ್‌ನಲ್ಲಿ1,500 ಕೋಟಿ ರೂ. ಗಳ ಮೈಕ್ರೋ ನಿಧಿಯ ಕ್ರಿಯಾ ಯೋಜನೆಗೆ ಸರಕಾರ ಮಂಜೂರಾತಿ ನೀಡಿದ್ದರಿಂದ, ಕೆಲಸ ಆರಂಭಿಸಲಾಗಿದೆ. ಮ್ಯಾಕ್ರೋ ನಿಧಿಯ 1,500 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಶೀಘ್ರ ಒಪ್ಪಿಗೆ ಪಡೆಯಲಾಗುವುದು ಎಂದರು.

***
ಕಲ್ಯಾಣ ಕರ್ನಾಟಕ 74 ವರ್ಷಗಳ ನಡೆದು ಬಂದ ಹಾದಿ ನೆನಪಿಸುವ ತ್ಸವ ಇದಾಗಲಿದೆ. ಮುಂದಿನ ವಾರ ಮುಖ್ಯಮಂತ್ರಿಗಳಿಂದ ಉತ್ಸವದ ಲೊಗೋ ಬಿಡುಗಡೆ ಮಾಡಲಾಗುವುದು. ಕಲ್ಯಾಣ ಕರ್ನಾಟಕದ ಎಲ್ಲಗ್ರಾಮಗಳಲ್ಲಿಉತ್ಸ ಆಚರಣೆ ಮಾಡಲಾಗುವುದು.

– ದತ್ತಾತ್ರೇಯ ಪಾಟೀಲ್‌ ರೇವೂರ, ಕೆಕೆಆರ್‌ಡಿಬಿ ಅಧ್ಯಕ್ಷ