Saturday, 21st September 2024

ಸರ್ಕಾರಿ ಬಂಗಲೆ ತೊರೆಯುವಂತೆ ಮೆಹಬೂಬಾ ಮುಫ್ತಿಗೆ ನೋಟೀಸು

ಶ್ರೀನಗರ: ಕಾಶ್ಮೀರದ ಫೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ ಸರ್ಕಾರಿ ಬಂಗಲೆ ತೊರೆಯು ವಂತೆ ಕೇಂದ್ರ ಸರ್ಕಾರ ನೋಟಿಸ್‌ ನೀಡಿದೆ.

‘ನಾನು ವಾಸವಾಗಿದ್ದ ಸರ್ಕಾರಿ ನಿವಾಸ ತೊರೆಯುವಂತೆ ನೋಟಿಸ್‌ ನೀಡಲಾಗಿದೆ’ ಎಂದು ಹೇಳಿದ್ದಾರೆ. ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿರುವ ಫೇರ್‌ವ್ಯೂ ನಿವಾಸ ತೊರೆ ಯಲು ಮುಫ್ತಿ ಅವರಿಗೆ ತಿಳಿಸಲಾಗಿದೆ.

 

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಮೆಹಬೂಬಾ ಮುಫ್ತಿ ಟೀಕಿಸು ತ್ತಲೇ ಬಂದಿದ್ದಾರೆ. ‘ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟರೆ, ಅದು ಸ್ವಾತಂತ್ರ್ಯ ಹೋರಾಟಕ್ಕಿಂತ ದೊಡ್ಡದು’ ಎಂಬ ಹೇಳಿಕೆ ನೀಡಿದ್ದರು.

ಕಾಶ್ಮೀರ ಪ್ರತ್ಯೇಕವಾದಿ ನಾಯಕ ಯಾಸಿನ್‌ ಭಟ್ಕಳ್‌ಗೆ ಜೈಲು ಶಿಕ್ಷಿ ವಿಧಿಸಿದ್ದನ್ನು ಮುಫ್ತಿ ಖಂಡಿಸಿದ್ದರು. ಕಾಶ್ಮೀರ್‌ ಫೈಲ್ಸ್‌ನಂತಹ ಚಿತ್ರದಿಂದ ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚಲಿದೆ ಎಂದು ಹೇಳಿದ್ದರು.

ಆರ್ಟಿಕಲ್ 370 ರದ್ದು ಮಾಡಿದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುಫ್ತಿ ಅವರಿಗೆ ನೋಟಿಸ್‌ ನೀಡಲಾಗಿದೆ ಎಂಬ ಶಂಕೆಗಳು ವ್ಯಕ್ತವಾಗಿದೆ.