Friday, 18th October 2024

BBK 11: ಅಪ್ಪಂಗೆ ಹುಟ್ಟಿದ್ರೆ ನನ್ನ ಕಣ್ಣೆದುರು ಬಂದು ಕೇಸ್ ಬಗ್ಗೆ ಮಾತಾಡಲಿ: ಜಗದೀಶ್ ಎದುರು ಚೈತ್ರಾ ಕುಂದಾಪುರ ರೌದ್ರಾವತಾರ

Chaithra Kundapura and Jagadish

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾಗಿ ಎರಡು ವಾರಗಳು ಕಳೆದಿವೆ. ಕಳೆದ ವಾರಕ್ಕೆ ಸ್ವರ್ಗ-ನರಕ ಕಾನ್ಸೆಫ್ಟ್ ಅಂತ್ಯವಾಗಿದ್ದು, ಈಗ ಎಲ್ಲರೂ ಜೊತೆಯಾಗಿ ಮನೆಯಲ್ಲಿದ್ದಾರೆ. ಮನೆ ಒಂದಾದ ಬಳಿಕ ಜಗಳವೂ ಜೋರಾಗಿ ನಡೆಯುತ್ತಿದೆ. ಮೊದಲ ಎರಡು ವಾರ ಜಗಳದ ವಿಚಾರದಲ್ಲಿ ಕೊಂಚ ಸೈಲೆಂಟ್ ಆಗಿದ್ದ ಚೈತ್ರಾ ಕುಂದಾಪುರ ಇದೀಗ ರೌದ್ರವತರ ತೋರಿದ್ದಾರೆ. ಅದು ಕೂಡ ಲಾಯರ್ ಜಗದೀಶ್ ಮೇಲೆ.

ವಿವಾದಗಳಿಂದಲೇ ಹೆಚ್ಚು ಸುದ್ದಿಯಾದ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಬಂದಿದ್ದು ಎಲ್ಲರಿಗೂ ಅಚ್ಚರಿ ನೀಡಿತು. ಜೈಲಿನಿಂದ ಹೊರಬಂದು ನನ್ನನ್ನು ನಾನು ಪ್ರೂವ್ ಮಾಡಿಕೊಳ್ಳಲು ಇದೊಂದು ಉತ್ತಮ ವೇದಿಕೆ ಎಂದು ಹೇಳಿದ್ದರು. ಇದೀಗ ಇದೇ ವೇದಿಕೆ ಮೇಲೆ ತನ್ನ ಕೇಸ್ ವಿಚಾರದ ಬಗ್ಗೆ ಮಾತನಾಡಿದ ಜಗದೀಶ್ ಮೇಲೆ ಚೈತ್ರಾ ನೈಜ್ಯ ರೂಪ ತೋರಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಹಾಗೂ ಜಗದೀಶ್ ಮಧ್ಯೆ ಯಾವುದೋ ವಿಚಾರಕ್ಕೆ ಕಿರಿಕ್ ಆಗಿದೆ. ಜಗದೀಶ್ ಅವರು ಕ್ಯಾಪ್ಟನ್ ಶಿಶಿರ್ ಜೊತೆ ಮಾತನಾಡುತ್ತಾ ‘ನನಗೂ ಫಾಲೋವರ್ಸ್ ಇದಾರೆ. ಆಕೆ ಮೇಲೆ 28 ಕೇಸ್ ಇದೆ ಎಂದರು. ಇದು ಚೈತ್ರಾ ಅವರನ್ನು ಕೆರಳಿಸಿತು. ‘ತಾಕತ್ ಇದ್ರೆ ನನ್ನ ಎದುರಿಗೆ ಬಂದು ಮಾತನಾಡಲಿ. ನನ್ ಕೇಸ್ ಬಗ್ಗೆ ಮಾತನಾಡೋ ಯೋಗ್ಯತೆ ಯಾರಿಗೂ ಇಲ್ಲ. 50 ಅಲ್ಲ 100 ಕೇಸ್ ಹಾಕಿಸಿಕೊಳ್ಳುತ್ತೇನೆ. ಇವರ ಅಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ. ಯಾವನಾದ್ರು ಅಪ್ಪನಿಗೆ ಹುಟ್ಟಿದ್ರೆ ನನ್ನ ಕಣ್ಣ ಎದುರು ಬಂದು ಕೇಸ್ ಬಗ್ಗೆ ಮಾತನಾಡಲಿ’ ಎಂದು ಚೈತ್ರಾ ಅವರು ಸವಾಲು ಹಾಕಿದ್ದಾರೆ.

ಧನರಾಜ್-ಅನುಷಾ ನಾಮಿನೇಟ್:

ಬಿಗ್ ಬಾಸ್ ಮನೆಯ ಮೂರನೇ ವಾರದ ಎರಡನೇ ನಾಮಿನೇಷನ್ ಆಗಿದೆ. ಸೋಮವಾರ ಶಿಶಿರ್ ಅವರು ನೇರವಾಗಿ ಅನುಷಾ ಅವರನ್ನು ಈ ವಾರ ಮನೆಯಿಂದ ಹೊರಹೋಗಲು ಆಯ್ಕೆ ಮಾಡಿದ್ದರು. ಇದು ಮನೆಯಲ್ಲಿ ಬೆಂಕಿ ಹತ್ತಿಕೊಂಡಿತ್ತು. ಇಂದು ಶಿಶಿರ್ ಅವರು ನೇರವಾಗಿ ಧನರಾಜ್ ಆಚಾರ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಕ್ಯಾಪ್ಟನ್ ಶಿಶಿರ್​ ಕೊಟ್ಟ ಕಾರಣ ಕೇಳಿ ಧನರಾಜ್ ಆಚಾರ್ ಕಣ್ಣೀರು ಹಾಕಿದ್ದಾರೆ.

Sudeep Bigg Boss: ಕಿಚ್ಚನಿಂದ ಮತ್ತೊಂದು ಟ್ವೀಟ್: ಎಲ್ಲ ವಿವಾದಗಳಿಗೆ ತೆರೆ ಎಳೆದ ಸುದೀಪ್