Saturday, 26th October 2024

BBK 11: ಬಿಗ್ ಬಾಸ್ ಮನೆಯಲ್ಲಿ ತಿನ್ನೋ ವಿಚಾರಕ್ಕೂ ಜಗಳ: ಇನ್ಮುಂದೆ ನಾನು ಟೀ ಕುಡಿಯಲ್ಲ ಎಂದು ಚೈತ್ರಾ ಶಪಥ

Chaithra Kundapura (2)

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾಗಿ ನಾಲ್ಕು ವಾರ ಆಗುತ್ತಾ ಬಂದಿದೆ. ಆದರೆ, ಮನೆ ಮಂದು ಇನ್ನೂ ಸೆಟಲ್ ಆದಂತೆ ಕಾಣುತ್ತಿಲ್ಲ. ಪ್ರತಿಯೊಂದು ಸಣ್ಣ-ಪುಟ್ಟ ವಿಚಾರಕ್ಕೂ ಜಗಳವಾಗುತ್ತಿದೆ. ಕಳೆದ ಮೂರು ವಾರಗಳಿಂದ ಕಿಚ್ಚ ಸುದೀಪ್ ಬಂದು ಮನವರಿಕೆ ಮಾಡುವ ಕೆಲಸ ಮಾಡಿದ್ದರೂ ಯಾವುದೆ ಪ್ರಯೋಜನ ಆಗುತ್ತಿಲ್ಲ. ಇದೀಗ ಮನೆಯೊಳಗೆ ತಿನ್ನೋ ವಿಚಾರಕ್ಕೂ ಜಗಳ ನಡೆದಿದೆ.

ಮನೆಯ ಎಲ್ಲಾ ಸದಸ್ಯರು ಡೈನಿಂಗ್ ಹಾಲ್‌ನಲ್ಲಿ ಕುಳಿತು ಊಟ ಮಾಡುತ್ತಿರುತ್ತಾರೆ. ಆಗ ಗೌತಮಿ ಜಾಧವ್ ಅವರು ಎಷ್ಟು ಬೇಕೋ ಅಷ್ಟು ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಇದಕ್ಕೆ ಚೈತ್ರಾ ಅವರು, ನಾನು ನಮ್ಮವರಿಗೆ ಸಕ್ಕರೆ ಹಾಕ್ಕೋಬೇಡಿ ಎಂದು ಹೇಳಿದೆ ಎಂದಿದ್ದಾರೆ. ಯಾರಾದರೂ ತಿನ್ನೋ ಟೈಮಲ್ಲಿ ಹಾಗೆಲ್ಲಾ ಮಾತನಾಡಬಾರದು ಎಂದು ಚೈತ್ರಾಗೆ ಮಂಜು ಸಲಹೆ ನೀಡಿದ್ದಾರೆ.

ನಾನು ಬೇರೆ ಯಾರಿಗೋ ಹೇಳಿದ್ದಲ್ಲ, ನಮ್ಮ ಟೀಮ್‌ನವರಿಗೆ ಹೇಳಿದ್ದು ಎಂದು ಚೈತ್ರಾ ಮತ್ತೊಮ್ಮೆ ಉಚ್ಚರಿಸಿದ್ದಾರೆ. ಆಗ ಧ್ವನಿ ಎತ್ತಿದ ಗೌತಮಿ, ನಮ್ಮವರು ನಿಮ್ಮವರು ಅಂತಲ್ಲ, ಯಾರಿಗೂ ಹಾಗೇ ಹೇಳಬೇಡಿ. ನಾನು ನಿಮ್ಮವರ ಪರವಾಗಿ ಮಾತನಾಡುತ್ತಿದ್ದೇನೆ. ತಿನ್ನಬೇಕಾದರೂ ಯಾರು ಮಾತನಾಡಬೇಡಿ ಎಂದಿದ್ದಾರೆ. ಚೈತ್ರಾ ಸಿಟ್ಟಾದಾಗ ಮಾನಸ ಅವರು ಸುಮ್ನಿರಿ ಅಕ್ಕ, ದಯವಿಟ್ಟು ಊಟ ಮಾಡುವಾಗ ಇವೆಲ್ಲಾ ಮಾತಾಡಬೇಡಿ ಎಂದು ಹೇಳಿದ್ದಾರೆ.

ಈ ವಿಚಾರದಿಂದ ಬೇಸರಗೊಂಡ ಚೈತ್ರಾ ಕುಂದಾಪುರ, ಇದೇ ಲಾಸ್ಟ್, ಇನ್ಮೇಲೆ ನಾನು ಟೀ ಕುಡಿಯಲ್ಲ ಎಂದು ಶಪಥ ಮಾಡಿದ್ದಾರೆ. ಇದಕ್ಕೆ ಮಂಜು “ಒಳ್ಳೇದು” ಎಂದಿದ್ದಾರೆ. ನೇರವಾಗಿ ಕಿಚನ್​ಗೆ ತೆರಳಿದ ಚೈತ್ರಾ, ಕೈಯಲ್ಲಿದ್ದ ಟೀಯನ್ನು ಕುಡಿದು ಇದೇ ನನ್ನ ಲಾಸ್ಟ್ ಟೀ ಎಂದಿದ್ದಾರೆ.

ಐಶ್ವರ್ಯ ಜೊತೆಗೂ ಜಗಳ: ನಿಯಮಗಳ ಪ್ರಕಾರ ಕ್ಯಾಪ್ಟನ್ ಹೊರತು ಪಡಿಸಿ ಯಾರೂ ಕೂಡ ಈ ರೂಂನ ಬಳಕೆ ಮಾಡಬಾರದು. ಆದರೆ, ಈ ನಿಯಮವನ್ನು ತ್ರಿವಿಕ್ರಮ್ ಮುರಿದಿದ್ದಾರೆ. ತ್ರಿವಿಕ್ರಮ್ ಅವರು ಚೈತ್ರಾ ಅವರನ್ನು ಕ್ಯಾಪ್ಟನ್​ ರೂಂಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿದ ಐಶ್ವರ್ಯಾ ಅವರು ಚೈತ್ರಾ ಅವರನ್ನು ಕರೆದುಕೊಂಡು ಬರಲು ಪ್ರಯತ್ನಿಸಿದರು. ಐಶ್ವರ್ಯಾ ಅವರು, ಚೈತ್ರಾನ ಕೈ ಹಿಡಿದು ಎಳೆದು ತರುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಚೈತ್ರಾ ಕೆಂಡಾಮಂಡಲರಾಗಿದ್ದಾರೆ. ಕೈ ಮುಟ್ಟಿ ಮಾತನಾಡಬೇಡಿ. ನನ್ನ ಕಾಲು ನೆಟ್ಟಗಿದೆ ಎಂದು ಕೂಗಾಡಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿ ರೊಚ್ಚಿಗೆದ್ದ ಧರ್ಮ: ತಬ್ಬಿಬ್ಬಾದ ಧನು