Thursday, 26th September 2024

Devara Part 1: ʼದೇವರʼ ಬಿಡುಗಡೆಗೆ ಮುನ್ನವೇ ದಾಖಲೆಯ ಕಲೆಕ್ಷನ್‌; ಅಡ್ವಾನ್ಸ್‌ ಬುಕ್ಕಿಂಗ್‌ನಿಂದ ಜೂನಿಯರ್‌ ಎನ್‌ಟಿಆರ್‌ ಚಿತ್ರ ಗಳಿಸಿದ್ದೆಷ್ಟು?

Devara Part 1

ಹೈದರಾಬಾದ್‌: ಟಾಲಿವುಡ್‌ ಯಂಗ್‌ ಟೈಗರ್‌ ಜೂನಿಯರ್‌ ಎನ್‌ಟಿಆರ್‌ (Jr NTR) ಅಭಿಮಾನಿಗಳ ಸುಮಾರು 2 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಯಾಕೆಂದರೆ ನಾಳೆ (ಸೆಪ್ಟೆಂಬರ್‌ 27) ಜೂನಿಯರ್‌ ಎನ್‌ಟಿಆರ್‌ ಅಭಿನಯದ ʼದೇವರ: ಪಾರ್ಟ್‌ 1ʼ (Devara: Part 1) ಚಿತ್ರ ಬಿಡುಗಡೆಯಾಗಲಿದೆ. ಭಾರತೀಯ ಚಿತ್ರರಂಗದಲ್ಲೇ ದಾಖಲೆ ಬರೆದ ರಾಜಮೌಳಿ ಅವರ ʼಆರ್‌.ಆರ್‌.ಆರ್‌.ʼ ಸಿನಿಮಾದ ಬಳಿಕ ಜೂನಿಯರ್‌ ಎನ್‌ಟಿಆರ್‌ ಅಭಿನಯದ ಯಾವ ಚಿತ್ರವೂ ತೆರೆಕಂಡಿರಲಿಲ್ಲ. ಹೀಗಾಗಿ ʼದೇವರʼ ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಹೀಗಾಗಿ ಸಿನಿಮಾ ಬಿಡಗಡೆ ಮುನ್ನವೇ ಅಡ್ವಾನ್ಸ್‌ ಬುಕ್ಕಿಂಗ್‌ ಮೂಲಕ ಕೋಟಿ ಕೋಟಿ ರೂ. ಬಾಚಿಕೊಂಡಿದೆ.

2016ರಲ್ಲಿ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ʼಜನತಾ ಗ್ಯಾರೇಜ್‌ʼ (Janatha Garage) ಸಿನಿಮಾದಲ್ಲಿಒಟ್ಟಾಗಿ ಕೆಲಸ ಮಾಡಿದ್ದ ಜನಪ್ರಿಯ ನಿರ್ದೇಶಕ ಕೊರಟಾಲ ಶಿವ ಮತ್ತು ಜೂನಿಯರ್‌ ಎನ್‌ಟಿಆರ್‌ ಸುಮಾರು 8 ವರ್ಷಗಳ ಬಳಿಕ ʼದೇವರʼ ಚಿತ್ರದ ಮೂಲಕ ಒಂದಾಗಿದ್ದು ಕೂಡ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿತ್ತು. ಚಿತ್ರ ಸೆಟ್ಟೇರಿದಾಗಿನಿಂದಲೂ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ಕೊನೆಗೂ ಅಭಿಮಾನಿಗಳು ಕಾತುರಕ್ಕೆ ತೆರೆ ಬಿದ್ದಿದೆ.

60 ಕೋಟಿ ರೂ. ಗಳಿಕೆ

ʼದೇವರ: ಪಾರ್ಟ್‌ 1ʼ ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ತೆಲುಗಿನ ಜತೆಗೆ ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ತೆರೆ ಕಾಣುತ್ತಿದೆ. ವಿಶೇಷ ಎಂದರೆ ಚಿತ್ರ ಮೊದಲದ ದಿನದ ಅಡ್ವಾನ್ಸ್‌ ಬುಕ್ಕಿಂಗ್‌ನಿಂದಲೇ ಬರೋಬ್ಬರಿ 60 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ. ವರದಿಯೊಂದರ ಪ್ರಕಾರ 42.86 ಕೋಟಿ ರೂ. ಭಾರತದಿಂದಲೇ ಹರಿದು ಬಂದಿದೆ. ತೆಲುಗಿನ ಸುಮಾರು 10 ಲಕ್ಷ ಟಿಕೆಟ್‌ ಬಿಕರಿಯಾಗಿದೆ. ಹಿಂದಿಯ ಸುಮಾರು 40,000 ಟಿಕೆಟ್‌ ಮಾರಾಟವಾಗಿದೆ. ಅತೀ ಹೆಚ್ಚು ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ 16.86 ಕೋಟಿ ರೂ. ಮತ್ತು 17.2 ಕೋಟಿ ರೂ. ಗಳಿಸಿದೆ. ಇನ್ನು ಅಮೆರಿದಲ್ಲಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 75,000 ಟಿಕೆಟ್‌ ಬಿಕರಿಯಾಗಿದೆ.

ಕರ್ನಾಟಕವೊಂದರಲ್ಲೇ ಮೊದಲ ದಿನ ‘ದೇವರ’ ಸಿನಿಮಾದ ಸುಮಾರು 3,000ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಳ್ಳಲಿವೆ. ಬೆಂಳೂರಿನಲ್ಲಿಯೂ ಕನ್ನಡ ಸೇರಿದಂತೆ ವಿವಿಧ ಆವೃತ್ತಿಗಳ ಹೆಚ್ಚಿನ ಸಂಖ್ಯೆಯ ಪ್ರದರ್ಶನ ಇರಲಿದೆ.

ಈ ಸುದ್ದಿಯನ್ನೂ ಓದಿ: Jr NTR: ನಿಮಗಿಂತ ಹೆಚ್ಚು ನೋವು ನನಗಾಗಿದೆ; ಫ್ಯಾನ್ಸ್‌ ಬಳಿ ಜೂನಿಯರ್ ಎನ್‌ಟಿಆರ್ ಹೀಗೆ ಹೇಳಿದ್ದೇಕೆ?

ತೆಲುಗಿನತ್ತ ಮುಖ ಜಾನ್ವಿ ಕಪೂರ್‌

ನಿರ್ಮಾಪಕ ಬೋನಿ ಕಪೂರ್‌ ಮತ್ತು ನಟಿ ಶ್ರೀದೇವಿ ದಂಪತಿ ಪುತ್ರಿ, ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ʼದೇವರʼ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಹಾಡಿನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡಿರುವ ಹಾಡುಗಳ ಮೂಲಕ ಮೋಡಿ ಮಾಡಿದ್ದಾರೆ. ಮತ್ತೊಂದು ವಿಶೇಷ ಎಂದರೆ ಬಾಲಿವುಡ್‌ನ ಸೈಫ್‌ ಆಲಿ ಖಾನ್‌ ʼಆದಿ ಪುರುಷ್‌ʼ ಬಳಿಕ ಮತ್ತೊಮ್ಮೆ ತೆಲುಗಿನಲ್ಲಿ ವಿಲನ್‌ ಆಗಿ ಕಾಣಿಸಿಕೊಂಡಿದ್ದಾರೆ. ಎರಡು ಪಾರ್ಟ್‌ಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಕಡಲ ತಡಿಯ ಜನರ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.