Friday, 18th October 2024

BBK 11: ಜಗಳಗಳಿಂದಲೇ ಕೂಡಿದ್ದ ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಮಗುವಿನ ಅಳುವ ಸದ್ದು

Dhanraj Crying

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮೂರನೇ ವಾರಕ್ಕೆ ಕಾಲಿಟ್ಟಿದೆ. ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದ್ದು, ಬಿಗ್ ಬಾಸ್ ಸ್ಪರ್ಧಿಗಳೊಂದಿಗೆ ಫೋನ್ ಮೂಲಕ ಮಾತ್ರ ಮಾತನಾಡುತ್ತಿದ್ದಾರೆ. ಇದರ ನಡುವೆ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಕ್ಯಾಪ್ಟನ್ ಶಿಶಿರ್ ಅವರು ನೇರವಾಗಿ ಒಬ್ಬೊಬ್ಬರನ್ನು ಈ ವಾರ ಮನೆಯಿಂದ ಹೊರಹೋಗಲು ಆಯ್ಕೆ ಮಾಡುತ್ತಿದ್ದಾರೆ. ಹೀಗೆ ನಾಮಿನೇಟ್ ಆದವರಲ್ಲಿ ಧನರಾಜ್ ಆಚಾರ್ ಕೂಡ ಒಬ್ಬರು.

ಧನರಾಜ್ ಮನೆಯಲ್ಲಿ ಅತಿಥಿಯೋ, ಆಟಗಾರನೋ, ಫಲ್ ಕನ್‌ಪ್ಯೂಶನ್ ಇದೆ. ನೀವು ಎಲ್ಲೋ ಕಳೆದು ಹೋಗಿದ್ದೀರಾ ಎಂಬುದು ನನ್ನ ಅನಿಸಿಕೆ. ಈ ಒಂದು ಕಾರಣಕ್ಕೆ ನಿಮ್ಮನ್ನು ನಾನು ನಾಮಿನೇಟ್ ಮಾಡುತ್ತಿದ್ದೇನೆ ಎಂದು ಶಿಶಿರ್ ಹೇಳಿದ್ದರು. ಇದನ್ನ ಕೇಳಿ ಧನರಾಜ್ ಕಣ್ಣೀರು ಹಾಕಿದ್ದಾರೆ. ನಾನೇ ಅನ್​ಫಿಟ್​ ಅನಿಸೋಕೆ ಶುರುವಾಗಿ ಹೋಗಿದೆ ಎಂದು ಹೇಳಿದ್ದರು. ಹೀಗೆ ಬೇಸರದಲ್ಲಿದ್ದ ಧನರಾಜ್​ಗೆ ಬಿಗ್ ಬಾಸ್ ಬೂಸ್ಟ್ ನೀಡಿದ್ದಾರೆ.

ಬಿಗ್ ಬಾಸ್‌ ಮನೆಯೊಳಗೆ ಇರುವ ಟೆಲಿಫೋನ್ ಬೂತ್‌ಗೆ ಒಂದು ಕರೆ ಬಂದಿದೆ. ಧನರಾಜ್ ಆಚಾರ್ ಅದನ್ನು ಸ್ವೀಕರಿಸಿದಾಗ, ಅಕ್ಷರಶಃ ಅವರು ಶಾಕ್ ಆದರು. ಅತ್ತ ಕಡೆಯಿಂದ ಧನರಾಜ್ ಆಚಾರ್ ಅವರ ಮಗಳು ಅಳುವ ಸದ್ದು ಕೇಳಿಸಿದೆ. ಮಗಳ ಅಳುವನ್ನು ಕೇಳಿ ಧನರಾಜ್ ಆಚಾರ್ ಕಣ್ಣೀರಿಟ್ಟಿದ್ದಾರೆ. ಪುಟ್ಟಿ, ನನ್ನ ಮಗಳೇ, ಸಾರಿ ಪುಟ್ಟ ಸರಿಯಾಗಿ ಆಟವಾಡಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ನನ್ನ ಮಗಳು ನೆನಪಾದಾಗೆಲ್ಲಾ ಇನ್ನೂ ಚೆನ್ನಾಗಿ ಆಡಬೇಕು ಅನಿಸುತ್ತದೆ. ಇದನ್ನೇ ನಾನು ಮೋಟಿವೇಟ್ ಆಗಿ ತೆಗೆದುಕೊಳ್ತೀನಿ. ಈ ಮನೆಯಲ್ಲಿ ನನ್ನ ಕಡೆ ಬೆರಳು ತೋರಿಸುವವರು ಹಾಗೂ ನನ್ನನ್ನು ಪ್ರಶ್ನೆ ಮಾಡುವವರಿಗೆ ಉತ್ತರವಾಗಿ ನಿಲ್ಲುವೆ ಎಂದು ಧನರಾಜ್ ಹೇಳಿದ್ದಾರೆ.

ಬಿಗ್ ಬಾಸ್ ಮನೆಗೆ ಕಾಲಿಟ್ಟ ಧನರಾಜ್ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಕಾಮಿಡಿ ಪಂಚ್​ನಿಂದ ಮಿಂಚಿದ್ದ ಧನರಾಜ್ ಡೊಡ್ಮನೆಲಿ ತುಂಬಾನೆ ಸೈಲೆಂಟ್ ಆಗಿದ್ದಾರೆ. ಆರಂಭದಿಂದಲೇ ಧನರಾಜ್ ಕೊಂಚ ವೀಕ್, ಕಾಣಿಸುವುದಿಲ್ಲ ಎಂದು ಪದೇ ಪದೇ ಮನೆಯವರು ಹೇಳುತ್ತಿದ್ದರು. ಬಳಿಕ ಶಿಶಿರ್ ಕೂಡ ಪುನಃ ಅದೇ ಕಾರಣ ನೀಡಿ ನಾಮಿನೇಟ್ ಮಾಡಿರುವುದು ಧನರಾಜ್​ಗೆ ಮತ್ತಷ್ಟು ಬೇಸರ ತರಿಸಿತ್ತು. ಆದರೀಗ ಮಗಳ ಸದ್ದು ಧನರಾಜ್ ಅವರನ್ನು ಯಾವರೀತಿ ಬದಲಾವಣೆ ಮಾಡುತ್ತೆ ಎಂಬುದು ನೋಡಬೇಕಿದೆ.

BBK 11: ಜಗದೀಶ್-ರಂಜಿತ್ ಹೊಡೆದಾಡಿಕೊಳ್ಳಲು ಏನು ಕಾರಣ?, ಬಿಗ್ ಬಾಸ್ ಮನೆಯಲ್ಲಿ ಏನಾಯಿತು?