Sunday, 6th October 2024

BBK 11: ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಆಚಾರ್ ಆಟ ಶುರು: ಶಾಕ್ ಆದ ಸ್ಪರ್ಧಿಗಳು

Dhanraj Achar BBK

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada) ಮನೆಗೆ ಸೋಷಿಯಲ್ ಮೀಡಿಯಾ ಸ್ಟಾರ್ ಧನರಾಜ್ ಆಚಾರ್ ಕಾಲಿಟ್ಟ ತಕ್ಷಣ ಈ ಬಾರಿ ಇಡೀ ಕರ್ನಾಟಕ ನಗುವಿನ ಅಲೆಯಲ್ಲಿ ತೇಲಲಿದೆ ಎಂದು ನಂಬಲಾಗಿತ್ತು. ಆದರೆ, ಮೊದಲ ಎರಡು ದಿನ ಧನರಾಜ್ ಎಲ್ಲೂ ಕಾಣಿಸಲಿಲ್ಲ. ಮೂರನೇ ದಿನ ಕನ್ಫೆಷನ್ ರೂಮ್​ಗೆ ತೆರಳಿ ನಾನು ಕಾನ್​ಫಿಡೆನ್ಸ್ ಕಳೆದುಕೊಳ್ಳುತ್ತಿದ್ದೇನೆ, ನನಗೆ ಆಗುತ್ತಿಲ್ಲ ಎಂದು ಬಿಗ್ ಬಾಸ್ ಮುಂದೆ ಕಣ್ಣೀರಿಟ್ಟಿದ್ದರು.

ನಾಲ್ಕನೇ ದಿನ ಬಿಗ್ ಬಾಸ್ ಮನೆ ಮತ್ತು ಕರ್ನಾಟಕದ ಜನತೆ ಧನರಾಜ್ ಅವರ ಉಗ್ರ ರೂಪ ಕೂಡ ಕಂಡರು. ಲಾಯರ್ ಜಗದೀಶ್ ಜೊತೆ ಟಾಸ್ಕ್ ವೇಳೆ ತಾಳ್ಮೆ ಕಳೆದುಕೊಂಡ ಧನರಾಜ್ ರೇಗಾಡಿದ್ದರು. ಇದೀಗ ಇವರು ತಮ್ಮ ಕಾಮಿಡಿ ಮೂಲಕ ಎಲ್ಲರನ್ನು ನಗಿಸಿದ್ದಾರೆ. ಮುಂಗಾರು ಮಳೆ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಎಪಿಕ್ ಡೈಲಾಗ್ ಹೇಳಿ ಎಲ್ಲರ ಮನಗೆದ್ದಿದ್ದಾರೆ.

ಧನರಾಜ್ ಅವರು ಎಲ್ಲ ಸ್ಪರ್ಧಿಗಳ ಎದುರು ಮುಂಗಾರು ಮಳೆ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಹೇಳುವ ಡೈಲಾಗ್ ಹೊಡೆದಿದ್ದಾರೆ. ಇದನ್ನು ಕಂಡ ಸ್ಪರ್ಧಿಗಳು ಇವರ ನಟನೆಗೆ ಫಿದಾ ಆಗಿದ್ದು, ಚಪ್ಪಾಳೆ ತಟ್ಟಿ, ಅಪ್ಪಿಕೊಂಡು ಭೇಷ್ ಎಂದಿದ್ದಾರೆ. ಥೇಟ್ ಗಣೇಶ್ ತರನೇ ನಟನೆ ಮಾಡಿದ್ದನ್ನು ಕಂಡು ಇತರೆ ಸ್ಪರ್ಧಿಗಳು ಶಾಕ್ ಆಗಿದ್ದಾರೆ.

ಕಾಮಿಡಿ ಪೀಸ್ ಎಂದಿದ್ದ ಜಗದೀಶ್:

ಬುಧವಾರ ಆಟದ ಮಧ್ಯೆ ಲಾಯರ್ ಜಗದೀಶ್ ಹಾಗೂ ಧನರಾಜ್ ನಡುವೆ ಜಗಳ ಆಗಿದೆ. ‘ನೀವು ರೆಫ್ರಿ ಆಗಲು ಫಿಟ್ ಇಲ್ಲ, ಕಾಮಿಡಿ ಪೀಸ್ ತರ ಆಡ್ತಾನೆ’ ಎಂದು ಜಗದೀಶ್ ಅವರು ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಧನರಾಜ್ ‘ಏಯ್, ಸುಮ್ನೆ ಕೋತ್ಕೊತಿಯಾ, ಇವನು ಯಾರು ಹೇಳೋಕೆ’ ಎಂದು ಸಿಟ್ಟಾಗಿದ್ದರು. ಬಳಿಕ ಜಗದೀಶ್ ಅವರು ನಾನು ನಿನ್ನ ಸಿಟ್ಟನ್ನು ಜನತೆಗೆ ತೋರಿಸಲು ಹೀಗೆ ಮಾಡಿದೆ ಎಂದು ಹೇಳಿ ಪ್ಯಾಚಪ್ ಮಾಡಿದ್ದರು.

ನಾನು ಕಂಡವರ ಹೆಣ್ಮಕ್ಕಳನ್ನು, ಕಂಡವರ ಮಂಚವನ್ನು ಯಾವತ್ತು ಮುಟ್ಟಿಲ್ಲ-ನಾನು ರಿಯಲ್ ಹೀರೋ: ಲಾಯರ್ ಜಗದೀಶ್