Monday, 16th September 2024

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟ ಸೈಫ್‌ ವಿರುದ್ದ ಪ್ರಕರಣ

ಮುಂಬೈ : ಬಾಲಿವುಡ್ ನಟ ಸೈಫ್ ಅಲಿಖಾನ್ ಸಂದರ್ಶನವೊಂದರಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪವನ್ನು ಎದುರಿಸುತ್ತಿದ್ದು, ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ.

ನನಗೆ ರಾಕ್ಷಸ ರಾವಣ ಪಾತ್ರ ಮಾಡಲು ತುಂಬಾ ಇಷ್ಟ ಇದೆ. ಸಹೋದರಿ ಶೂರ್ಪನಖಿಯ ಮೂಗನ್ನು ರಾಮನ ಸಹೋದರ ಲಕ್ಷಣ ಕತ್ತರಿಸಿದ್ದಕ್ಕಾಗಿಯೇ, ಸೀತಾ ಮಾತೆಯನ್ನು ರಾವಣ ಅಪಹರಣ ಮಾಡಿದ. ರಾಮನೊಂದಿಗೆ ಯುದ್ಧ ಮಾಡಿದ ಎಂದು ಹೇಳಿದ್ದಾರೆ.

ಖಾನ್ ರ ಈ ಹೇಳಿಕೆಯಿಂದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ಆದಿಪುರುಷ್ ಸಿನಿಮಾದಿಂದ ಕೈಬಿಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಬೆನ್ನಲ್ಲೇ ಸೈಫ್ ತಾವು ನೀಡಿದ್ದ ಹೇಳಿಕೆಯನ್ನೂ ವಾಪಸ್ ಪಡೆದುಕೊಂಡಿದ್ದರು.

ಜೌನ್ ಪುರ್ ನ ವಕೀಲರೊಬ್ಬರು ಈ ಕೇಸ್ ದಾಖಲು ಮಾಡಿದ್ದು, ಡಿ. 23 ರಂದು ಎಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

Leave a Reply

Your email address will not be published. Required fields are marked *