Thursday, 19th September 2024

ಕನ್ನಡದಲ್ಲೇ ಧನ್ಯವಾದ ತಿಳಿಸಿದ ಜೂ.ಎನ್​ಟಿಆರ್

ಬೆಂಗಳೂರು: ಸುದ್ದಿಗೋಷ್ಠಿ ವೇಳೆ ಜೂ.ಎನ್​ಟಿಆರ್ ಕನ್ನಡದಲ್ಲೇ ಮಾತನಾಡಿ ಕನ್ನಡಿಗರಿಗೆ ಧನ್ಯವಾದ ತಿಳಿಸಿದ್ದಾರೆ.
ಕನ್ನಡದಲ್ಲಿ ಜೂ.ಎನ್​ಟಿಆರ್ ಮಾತನಾಡಿ, ಕನ್ನಡಿಗರೊಂದಿಗೆ ಕನ್ನಡದ ನೆಲದಲ್ಲಿ ಕುಳಿತಿರುವುದಕ್ಕೆ ಸಂತಸವಾಗುತ್ತಿದೆ. ಪ್ರೋತ್ಸಾಹ ನೀಡುತ್ತಿರುವ ಎಲ್ಲರಗೂ ಧನ್ಯವಾದಗಳು ಎಂದು ಮಾತನಾಡಿದ್ದಾರೆ.

ಬಹುನಿರೀಕ್ಷಿತ ಆರ್‌.ಆರ್‌.ಆರ್‌ (RRR) ಸಿನಿಮಾ ಜನವರಿ 7 ರಂದು ರಿಲೀಸ್​ ಆಗಲಿದೆ. ಎಲ್ಲಾ ಭಾಷೆಯಲ್ಲೂ ತೆರೆ ಕಾಣುತ್ತಿರುವ ಈ ಚಿತ್ರ, ಕನ್ನಡದಲ್ಲೂ ಡಬ್ಬ್ ಆಗಿದ್ದು ಜನವರಿ 7 ಕರ್ನಾಟಕದ ಚಿತ್ರಮಂದಿರಗಳಲ್ಲೂ ರಿಲೀಸ್ ಆಗುತ್ತಿದೆ.​

ನಿರ್ದೇಶಕ ಎಸ್.ಎಸ್.ರಾಜಮೌಳಿ, ನಟ ರಾಮಚರಣ್, ಜೂ.ಎನ್​ಟಿಆರ್​, ನಟಿ ಆಲಿಯಾ ಭಟ್ ಸೇರಿದಂತೆ ಇಡೀ ಚಿತ್ರತಂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಆರ್​ಆರ್​ಆರ್ ಚಿತ್ರವು ಎಸ್​.ಎಸ್. ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಸಿನಿಮಾ. ಬಹುಕೋಟಿ ವೆಚ್ಚದ ಸಿನಿಮಾ 2022ರ ಜನವರಿ 7 ಪಂಚ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಆಲಿಯಾ ಭಟ್​, ಅಜಯ್ ದೇವಗನ್​ ರಾಮ್​ಚರಣ್​ ಸೇರಿ ದಂತೆ ಹಲವು ತಾರೆಯರು ಕಾಣಿಸಿಕೊಂಡಿದ್ದಾರೆ.

ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು ಎಲ್ಲಡೆ ಸಖತ್​ ರೆಸ್ಪಾನ್ಸ್​ ದೊರಕಿದೆ. ರಾಜಮೌಳಿ ನಿರ್ದೇಶನದಲ್ಲಿ ತಯಾರಾದ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಟ್ರೇಲರ್​ ನೋಡಿದ ಬಳಿಕ ಚಿತ್ರದ ಬಗ್ಗೆ ನಿರೀಕ್ಷೆ ಇನ್ನಷ್ಟು ಜಾಸ್ತಿ ಯಾಗಿದೆ.