Monday, 16th September 2024

ವಿವಾದ ಹುಟ್ಟಿಸಿದ ಟ್ವೀಟ್‌ ಡಿಲೀಟ್ ಮಾಡಿದ ಕಂಗನಾ

ಮುಂಬೈ: ತಲೆ ತೆಗೆಯುವ ಕಾಲ ಬಂದಿದೆ ಎಂಬ ಕಂಗ‌ನಾ ರಾಣಾವತ್ ಅವರ ಟ್ವೀಟ್ ವಿವಾದ ಹುಟ್ಟಿಸಿದ್ದು, ಕಂಗನಾ ತಮ್ಮ ಹೇಳಿಕೆಯನ್ನು ಡಿಲಿಟ್ ಮಾಡಿದ್ದಾರೆ.‌

ಸೈಫ್ ಅಲಿ ಖಾನ್ ಅವರ ತಾಂಡವ ವೆಬ್ ಸಿರೀಸ್ ಬಗ್ಗೆ ಮಾತನಾಡಿದ ಕಂಗನಾ. ಶ್ರೀ ಕೃಷ್ಣ ಶಿಶುಪಾಲನ 99 ತಪ್ಪುಗಳನ್ನು ಕ್ಷಮಿಸಿದ.‌ ಮೊದಲು ಶಾಂತಿ, ನಂತರ ಕ್ರಾಂತಿ. ಅವರ ತಲೆ ತೆಗೆಯುವ ಕಾಲ ಬಂದಿದೆ. ಜೈ ಶ್ರೀ ಕೃಷ್ಣ” ಎಂದು ಟ್ವೀಟ್ ಮಾಡಿ ದ್ದರು.

ಇದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಶಾಂತಿ ಕದಡುವ, ಹಿಂಸೆ ಪ್ರೇರೇಪಿಸುವ ಹೇಳಿಕೆಯಾಗಿದೆ ಎಂದು ದೂರಿದ್ದರು. ಮಹಾರಾಷ್ಟ್ರ ಸರ್ಕಾರ ಕಂಗನಾ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲು ಮುಂದಾಗಿತ್ತು.

Leave a Reply

Your email address will not be published. Required fields are marked *