Friday, 18th October 2024

BBK 11: ಎಲ್ಲರೊಂದಿಗೆ ಜಗಳ: ಬಿಗ್ ಬಾಸ್ ಮನೆಯಲ್ಲಿ ಏಕಾಂಗಿಯಾದ ಜಗದೀಶ್

Lawyer Jagadish

ಈ ಬಾರಿಯ ಬಿಗ್ ಬಾಸ್​ನ (Bigg Boss Kannada) ಸ್ಪೆಷಲ್ ಕಂಟೆಸ್ಟೆಂಟ್ ಲಾಯರ್ ಜಗದೀಶ್ ಅವರು ಮೊದಲ ವಾರದಿಂದ ಅಬ್ಬರಿಸುತ್ತಾ ಬರುತ್ತಿದ್ದಾರೆ. ಮನೆಯವರೊಂದಿಗೆ ಸದಾ ಒಂದಲ್ಲ ಒಂದು ವಿಚಾರಕ್ಕೆ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಎರಡು ವಾರ ನಾಮಿನೇಟ್ ಕೂಡ ಆದರು. ಮೊದಲ ವಾರ ಮನೆಯಲ್ಲಿ ಮಾಡಿದ ಅವಾಂತರ ಎಲ್ಲರಿಗೂ ತಿಳಿದಿದೆ. ವಿನಾಕಾರಣ ಇತರೆ ಸ್ಪರ್ಧಿಗಳ ಜೊತೆ ಜಗಳವಾಡುತ್ತಾ ಇದ್ದ ಇವರು ಬಳಿಕ ಬಿಗ್ ಬಾಸ್​ಗೆನೇ ಧಮ್ಕಿ ಹಾಕಿದ್ದರು.

ಆದರೆ, ಈಗ ಜಗದೀಶ್ ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದಾರೆ. ಎಲ್ಲರೊಂದಿಗೆ ಜಗಳವಾಡುತ್ತಾ ಇದ್ದ ಜಗದೀಶ್ ಇದೀಗ ಮನೆಯಲ್ಲಿ ಏಕಾಂಗಿಯಾಗಿದ್ದಾರೆ. ಇವರ ಜೊತೆ ಕೊಂಚ ಕ್ಲೋಸ್ ಆಗಿದ್ದ ಗೋಲ್ಡ್ ಸುರೇಶ್ ಕೂಡ ದೂರವಾಗಿದ್ದಾರೆ. ಜಗದೀಶ್ ಅವರು ಸುರೇಶ್ ಬಳಿ ಇದೇನು ಪಾನಕ ಮಾಡಿ ಇಟ್ಟಿದ್ದೀಯಾ? ಟೀ ಮಾಡ್ತಿರೋದು ನಾನು, ನನಗೆ ಹೇಗೆ ಬೇಕೋ ಹಾಗೇ ಮಾಡಿಕೊಳ್ತಿದ್ದೇನೆ. ಕುಡಿಯೋ ಹಂಗಿದ್ರೆ ಕುಡಿ ಇಲ್ಲ ಬಿಡು ಎಂದು ಸುರೇಶ್ ಹೇಳಿದ್ದಾರೆ.

ಇದಕ್ಕೆ ನಗು-ನಗುತ್ತಾ ಉತ್ತರ ಕೊಟ್ಟ ಜಗದೀಶ್​, ಕೆಲವರು ಗಟ್ಟಿ ಟೀ ಕುಡೀತಾರೆ ಅವರಿಗೆ ಏನ್ ಮಾಡ್ತಿಯಾ ಎಂದು ಜಗದೀಶ್ ಕೇಳಿದ್ದಾರೆ. ಅದೆಲ್ಲಾ ನನಗೆ ಗೊತ್ತಿಲ್ಲ ಹೋಗು ಎಂದಿದ್ದಾರೆ ಸುರೇಶ್. ಏನೋ ಬೆಳ್ಳಂ ಬೆಳಗ್ಗೆ ಬಕರಾ ಮಾಡ್ತಿದ್ದೀಯಾ ಎಂದು ಜಗದೀಶ್ ಶೇಕ್ ಹ್ಯಾಂಡ್ ಕೊಡು ಎಂದಿದ್ದಾರೆ. ಇದಕ್ಕೆ ಮುನಿಸಿಕೊಂಡ ಸುರೇಶ್, ನೀನು ಬೇಡ, ನಿನ್ನ ಶೇಕ್ ಹ್ಯಾಂಡ್ ಕೂಡ ಬೇಡ, ದೋಸ್ತಿನೂ ಬೇಡ ಎಂದಿದ್ದಾರೆ. ನಾನು ಸರಿಯಾಗಿ ಮಾತಾಡೋದು ನಿನ್ನ ಒಬ್ಬನೇ ಜೊತೆ ಮಾತ್ರ ಎಂದು ಜಗದೀಶ್ ಹೇಳಿದ್ದಾರೆ. ಇದಕ್ಕೆ ನನ್ನ ಬಳಿ ಯಾಕ್ ಮಾತಾಡ್ತಿಯಾ ಎಂದು ಸುರೇಶ್ ಕೇಳಿದರು. ನೀನು ನನ್ನ ದೋಸ್ತ್​​ ಕಣೋ ಎಂದು ಜಗದೀಶ್ ಹೇಳಿದ್ದಕ್ಕೆ ಸುರೇಶ್ ತಲೆ ಕೆಡಿಸಿಕೊಳ್ಳದೆ ಹೋಗಿದ್ದಾರೆ.

ಚೈತ್ರಾ-ಜಗದೀಶ್ ಜಗಳ:

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಹಾಗೂ ಜಗದೀಶ್ ಮಧ್ಯೆ ಕಿರಿಕ್ ಆಗಿದೆ. ಜಗದೀಶ್ ಅವರು ಕ್ಯಾಪ್ಟನ್ ಶಿಶಿರ್ ಜೊತೆ ಮಾತನಾಡುತ್ತಾ ‘ನನಗೂ ಫಾಲೋವರ್ಸ್ ಇದಾರೆ. ಆಕೆ ಮೇಲೆ 28 ಕೇಸ್ ಇದೆ ಎಂದರು. ಇದು ಚೈತ್ರಾ ಅವರನ್ನು ಕೆರಳಿಸಿತು. ‘ತಾಕತ್ ಇದ್ರೆ ನನ್ನ ಎದುರಿಗೆ ಬಂದು ಮಾತನಾಡಲಿ. ನನ್ ಕೇಸ್ ಬಗ್ಗೆ ಮಾತನಾಡೋ ಯೋಗ್ಯತೆ ಯಾರಿಗೂ ಇಲ್ಲ. 50 ಅಲ್ಲ 100 ಕೇಸ್ ಹಾಕಿಸಿಕೊಳ್ಳುತ್ತೇನೆ. ಇವರ ಅಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ. ಯಾವನಾದ್ರು ಅಪ್ಪನಿಗೆ ಹುಟ್ಟಿದ್ರೆ ನನ್ನ ಕಣ್ಣ ಎದುರು ಬಂದು ಕೇಸ್ ಬಗ್ಗೆ ಮಾತನಾಡಲಿ’ ಎಂದು ಚೈತ್ರಾ ಅವರು ಸವಾಲು ಹಾಕಿದ್ದಾರೆ.

BBK 11: ಬಿಗ್ ಬಾಸ್ ಮನೇಲಿ ಗುಟ್ಟಾಗಿ ನಡೀತಿದೆ ಮತ್ತೊಂದು ಲವ್ ಸ್ಟೋರಿ: ಯಾರ ಮಧ್ಯೆ ನೋಡಿ