Friday, 20th September 2024

ಆಂಜನೇಯ ಸ್ವಾಮಿ ದೇವರ ದರ್ಶನ ಪಡೆದ ಪವರ್‌ ಸ್ಟಾರ್‌ ಪುನೀತ್ ಕುಟುಂಬ

ಧಾರವಾಡ: ಕನ್ನಡ ಖ್ಯಾತ ನಟ ಪುನೀತ್ ರಾಜ್‍ಕುಮಾರ್ ಹಾಗೂ ಪತ್ನಿ ಅಶ್ವಿನಿ ಸೋಮವಾರ ಸಮೀಪದ ನುಗ್ಗಿಕೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ದಾಂಡೇಲಿಯಲ್ಲಿ ಶೂಟಿಂಗ್ ‌ಮುಗಿಸಿ ಬೆಂಗಳೂರಿಗೆ ವಾಪಸ್ಸಾಗುವ ವೇಳೆ ಸ್ಥಳ ಮಹಿಮೆ ಅರಿತು ದೇವಸ್ಥಾನಕ್ಕೆ ಭೇಟಿ‌ ನೀಡಿದ್ದರು. ಈ ವೇಳೆ ದೇವಸ್ಥಾನದ ವತಿಯಿಂದ ಪ್ರಧಾನ ಅರ್ಚಕರಾದ ಕಾಂತೇಶ ಬೊಮ್ಮನಹಳ್ಳಿ ಪುನೀತ ಅವರಿಗೆ ಶಾಲು‌ ಹೊದಿಸಿ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಈ ವೇಳೆ, ದೇವಸ್ಥಾನದ ಟ್ರಸ್ಟಿಗಳಾದ ಅರುಣಾ ದೇಸಾಯಿ, ವ್ಯಾಸ ದೇಸಾಯಿ, ಗುರುರಾಜ, ಬದ್ರಿನಾಥ ಸೇರಿದಂತೆ ಅನೇಕರಿದ್ದರು.