Saturday, 27th July 2024

ಪುಷ್ಪ ಸಿನಿಮಾ ಖ್ಯಾತಿಯ ಜಗದೀಶ್ ವಿರುದ್ಧ ಪ್ರಕರಣ ದಾಖಲು

ಚೆನ್ನೈ: ಯುವತಿ ಆತ್ಮಹತ್ಯೆ ಪ್ರಕರಣದಲ್ಲಿ ಪುಷ್ಪ ಸಿನಿಮಾ ಖ್ಯಾತಿಯ ಜಗದೀಶ್ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುಷ್ಪ ಚಿತ್ರದಲ್ಲಿ ಸಹನಟನಾಗಿ ನಟಿಸಿದ್ದ ಕೇಶವ ಅಲಿಯಾಸ್ ಜಗದೀಶ್ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐದು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಯುವತಿ ಸಾವಿಗೆ ಜಗದೀಶ್ ಕಾರಣ ಎಂದು ಮೃತಳ ತಂದೆ ಸಲ್ಲಿಸಿರುವ ದೂರಿನ ಆಧಾರದ ಮೇಲೆ ಪಂಜಗುಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ರಿಮಾಂಡ್​ಗೆ ಕಳುಹಿಸಿದ್ದಾರೆ.

ಪಂಜಗುಟ್ಟ ಪ್ರದೇಶದಲ್ಲಿ ವಾಸವಿದ್ದ ಯುವತಿ (ಕಿರಿಯ ಕಲಾವಿದೆ) ಕಳೆದ ತಿಂಗಳು 29ರಂದು ಆತ್ಮಹತ್ಯೆಗೆ ಶರಣಾದ್ದರು. ಇದಕ್ಕೆ ಜಗದೀಶ್​ ಕೊಟ್ಟ ಮಾನಸಿಕ ಕಿರುಕುಳವೇ ಕಾರಣ ಎಂಬ ಗಂಭೀರ ಆರೋಪವಿದೆ.

ಕಳೆದ ತಿಂಗಳು 27ರಂದು ಬೇರೆ ಪುರುಷನೊಂದಿಗೆ ಇದ್ದ ಯುವತಿಯ ಫೋಟೋಗಳನ್ನು ಜಗದೀಶ್ ಆಕೆಗೆ ತಿಳಿಯದಂತೆ ಕ್ಲಿಕ್ಕಿಸಿಕೊಂಡಿದ್ದ. ನಂತರ ಆಕೆಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಆರೋಪ.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಜಗದೀಶ್​​ನನ್ನು ಬಂಧಿಸಿ ರಿಮಾಂಡ್​ಗೆ ಕಳುಹಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!