Sunday, 27th October 2024

BBK 11: ಇಂದು ಸುದೀಪ್ ಬದಲಿಗೆ ನಿರೂಪಣೆ ಮಾಡಲು ಬರಲಿದ್ದಾರೆ ಈ ಸ್ಟಾರ್: ಯಾರು?

ಈ ವಾರ ಬಿಗ್ ಬಾಸ್ (Bigg Boss Kannada 11) ಮನೆಯಲ್ಲಿ ರಾಜಕೀಯ ಟಾಸ್ಕ್ ನಡೆಯಿತು. ಇದರಲ್ಲಿ ಹಲವು ತಪ್ಪುಗಳಾಗಿವೆ. ಆದರೆ, ಇದನ್ನು ವೀಕೆಂಡ್​ನಲ್ಲಿ ಸರಿಪಡಿಸಲು ಈ ವಾರ ಸುದೀಪ್ ಬಂದಿಲ್ಲ. ಕಳೆದ ವಾರ ಕಿಚ್ಚ ಸುದೀಪ್ ತಾಯಿ ಸರೋಜಾ ಅವರು ವಯೋಸಹಜ ಕಾಯಿಲೆಯಿಂದ ನಿಧನರಾದರು. ಹೀಗಾಗಿ ಅವರು ಈ ವೀಕೆಂಡ್‌ನಲ್ಲಿ ನಿರೂಪಣೆ ಮಾಡಲಿಲ್ಲ. ಕಳೆದ ವಾರ ಸುದೀಪ್ ಅವರು ಬಿಗ್ ಬಾಸ್ ಶೋ ನಿರೂಪಣೆ ಮಾಡುವಾಗಲೇ ಅವರ ತಾಯಿ ಐಸಿಯುವಿನಲ್ಲಿದ್ದರು. ಹೀಗಿದ್ದರೂ ಕೂಡ ನಿರೂಪಣೆ ಮುಗಿಸಿಯೇ ಹೊರಟಿದ್ದರು.

ಈ ವೀಕೆಂಡ್​ನ ಶನಿವಾರದ ಎಪಿಸೋಡ್​ಗೆ ಯೋಗರಾಜ್ ಭಟ್ ಬಂದಿದ್ದರು. ಮನೆಯೊಳಗೆ ಎಂಟ್ರಿ ಕೊಟ್ಟ ಇವರು ತಮ್ಮದೇ ಶೈಲಿಯಲ್ಲಿ ಕೆಲ ಸ್ಪರ್ಧಿಗಳಿಗೆ ಬಿಸಿ ಬಿಟ್ಟಿಸಿದರು. ಹನುಮಂತನ ಬಗ್ಗೆ ಮನೆಯವರಿಗೆ ಇರುವ ಅಭಿಪ್ರಾಯ ಹೊರಹಾಕಿಸಿದರು. ಜೊತೆಗೆ ಒಂದಿಷ್ಟು ತಮಾಷೆಯ ಮಾತುಗಳನ್ನೂ ಆಡಿದರು. ಇದೀಗ ಭಾನುವಾರದ ಎಪಿಸೋಡ್​ಗೆ ಮತ್ತೊಬ್ಬ ಸ್ಟಾರ್ ಬರಲಿದ್ದಾರಂತೆ.

ಸುದೀಪ್‌ ಅವರು ಇಂದು ಕೂಡ ಗೈರಾಗುವುದು ಬಹುತೇಕ ಖಚಿತವಾಗಿದ್ದು, ಆ ಎಪಿಸೋಡ್‌ ಅನ್ನು ನಟ, ನಿರೂಪಕ ಸೃಜನ್‌ ಲೋಕೇಶ್‌ ಅವರು ನಡೆಸಿಕೊಡುವ ಸಾಧ್ಯತೆಯಿದೆ ಎನ್ನಲಾಗಿದೆ. ಕಿಚ್ಚ ಸುದೀಪ್​ ಅವರ ಅನುಪಸ್ಥಿತಿಯಲ್ಲಿ ಅವರ ಜಾಗಕ್ಕೆ ಸೆಲೆಬ್ರೆಟಿಗಳು ವೀಕೆಂಡ್ ಶೋ ನಡೆಸಿಕೊಡಲು ನಿರ್ಧಾರ ಮಾಡಲಾಗಿದೆ. ಹೀಗಾಗಿ ಇಂದು ಸೃಜನ್ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಇವರು ಮನೆಯೊಳಗೆ ಹೋಗುತ್ತಾರ ಅಥವಾ ಸ್ಟೇಜ್​ನಿಂದಲೇ ಮಾತನಾಡುತ್ತಾರ ಎಂಬುದು ನೋಡಬೇಕಿದೆ.

ಭಟ್ರ ಪ್ರಶ್ನೆಗೆ ತಬ್ಬಿಬ್ಬಾದ ಹನುಮಂತ:

ನಿನ್ನೆಯ ಎಪಿಸೋಡ್​ನಲ್ಲಿ ಯೋಗರಾಜ್ ಭಟ್ ಅವರು ‘ಹನುಮಂತು ನಿಜಕ್ಕೂ ಇನ್ನೋಸೆಂಟ್ ಇದ್ದಾನಾ ಅಥವಾ ಸ್ಮಾರ್ಟ್ ಆಗಿದ್ದಾನಾ’ ಎಂದು ಮನೆಯವರಿಗೆ ಪ್ರಶ್ನೆ ಕೇಳಿದರು. ಇದಕ್ಕೆ ಸ್ಪರ್ಧಿಗಳು ನೇರವಾಗಿಯೇ ಉತ್ತರ ನೀಡಿದ್ದಾರೆ. ಶಿಶಿರ್ ಮಾತಾಡಿ, ಹನುಮಂತು ಬುದ್ದಿವಂತ, ದಡ್ಡ ಅಂತು ಅಲ್ಲವೇ ಅಲ್ಲ ಎಂದಿದ್ದಾರೆ. ತ್ರಿವಿಕ್ರಮ್ ಅವರು, ತಲೆ ಇದ್ದೇ ಅವರು ಬಂದಿದ್ದಾರೆ, ತಲೆ ಇದ್ದೇ ಅವರು ಆಟ ಆಡ್ತಿದ್ದಾರೆ, ತಲೆ ಇದ್ದೇ ಇದ್ದಾರೆ, ಸ್ಮಾರ್ಟ್ ಆಗಿ ಆಟ ಆಡ್ತಿದ್ದಾನೆ ಎಂದು ಹೇಳಿದ್ದಾರೆ. ಅಷ್ಟಿಲ್ಲದೇ ಅಷ್ಟೋಂದು ಶೋಗಳಲ್ಲಿ ಭಾಗವಹಿಸಿ, ಕೆಲ ಕಾರ್ಯಕ್ರಮಗಳಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.

BBK 11: ಹನುಮಂತನ ನೈಜ್ಯ ರೂಪ ಅನಾವರಣ: ಸ್ಪರ್ಧಿಗಳು ಹೇಳಿದ ಒಂದೊಂದು ಮಾತು ನೀವೇ ನೋಡಿ