ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Manchu Manoj: ವಿಜಯ್‌ ದೇವರಕೊಂಡ ನಟಿಸಿದ್ದ ಈ ಸೂಪರ್‌ ಹಿಟ್‌ ಚಿತ್ರ ರಿಜೆಕ್ಟ್‌ ಮಾಡಿದ್ರಂತೆ ಈ ನಟ!

ನಟ ಮಂಚು ಮನೋಜ್ 2017 ರ ಬಳಿಕ ಯಾವುದೇ ಚಿತ್ರದಲ್ಲಿ ನಾಯಕ ನಾಗಿ ನಟಿಸಿರಲಿಲ್ಲ. ಈಗ ಏಳು ವರ್ಷಗಳ ಬಳಿಕ ಮಂಚು ಮನೋಜ್ ಮತ್ತೆ ಸಿನಿ ಜರ್ನಿಗೆ ಎಂಟ್ರಿ ನೀಡಿದ್ದಾರೆ. ಚಿತ್ರದ ಪ್ರಚಾರದ ಸಂದರ್ಭದಲ್ಲಿ ಮಂಚು ಮನೋಜ್ ಅವರು ನಿರಾಕರಣೆ ಮಾಡಿದ ಕೆಲವು ಚಿತ್ರಗಳ ಬಗ್ಗೆ ಸಂದರ್ಶನ ವೊಂದರಲ್ಲಿ ಮಾತನಾಡಿದ್ದಾರೆ.

ವಿಜಯ್‌ ದೇವರಕೊಂಡ ನಟಿಸಿದ್ದ ಚಿತ್ರ ರಿಜೆಕ್ಟ್‌ ಮಾಡಿದ್ರಂತೆ ಈ ನಟ!

Profile Pushpa Kumari May 30, 2025 4:29 PM

ನವದೆಹಲಿ: ಮಂಚು ಮನೋಜ್ (Manchu Manoj) ನಟನೆಯ ‘ಭೈರವ’ ಸಿನಿಮಾ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಗೊಂಡಿದೆ. ಆ್ಯಕ್ಷನ್ ಡ್ರಾಮಾ ಚಿತ್ರವಾಗಿರುವ ಇದನ್ನು ವಿಜಯ್ ಕನಕಮೇಡಲ ನಿರ್ದೇಶನ ಮಾಡಿದ್ದಾರೆ .ಈ ಚಿತ್ರದಲ್ಲಿ ಮಂಚು ಮನೋಜ್ ಬೆಲ್ಲಕೊಂಡ ಸಾಯಿ ಶ್ರೀನಿವಾಸ್, ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟ ಮಂಚು ಮನೋಜ್ 2017 ರ ಬಳಿಕ ಯಾವುದೇ ಚಿತ್ರದಲ್ಲಿ ನಾಯಕನಾಗಿ ನಟಿಸಿರಲಿಲ್ಲ. ಈಗ ಏಳು ವರ್ಷಗಳ ಬಳಿಕ ಮಂಚು ಮನೋಜ್ ಮತ್ತೆ ಸಿನಿ ಜರ್ನಿ ಗೆ ಎಂಟ್ರಿ ನೀಡಿದ್ದಾರೆ. ಚಿತ್ರದ ಪ್ರಚಾರದ ಸಂದರ್ಭದಲ್ಲಿ ಮಂಚು ಮನೋಜ್ ಅವರು ನಿರಾಕರಣೆ ಮಾಡಿದ ಕೆಲವು ಚಿತ್ರಗಳ ಬಗ್ಗೆ ಸಂದರ್ಶನ ವೊಂದರಲ್ಲಿ ಮಾತನಾಡಿದ್ದಾರೆ.

ಅರ್ಜುನ್ ರೆಡ್ಡಿ ಅವರ ಚಿತ್ರವೊಂದು ವಿಜಯ್ ದೇವರಕೊಂಡ ಅವರನ್ನು ರಾತ್ರೋರಾತ್ರಿ ಸ್ಟಾರ್ ನಟನಾಗಿ ಮಾಡಿದೆ. ಆದರೆ ಆ ಸಿನಿಮಾದ ನಾಯಕ ಪಾತ್ರಕ್ಕೆ ಮೊದಲ ಆಯ್ಕೆ ವಿಜಯ್ ದೇವರಕೊಂಡ ಆಗಿರಲಿಲ್ಲ. ಅಸಲಿಗೆ ಈ ಸಿನಿಮಾ ಮೊದಲು ಆಫರ್ ಆಗಿದ್ದು ನಟ ಮನೋಜ್ ಮಂಚು ಅವರಿಗೆ ಎಂಬುದನ್ನು ಸ್ವತ: ಅವರೇ ಸಂದರ್ಶನದಲ್ಲಿ ಹೇಳಿಕೊಂಡಿ ದ್ದಾರೆ. ಹೌದು ನಟ ಮಂಚು ಮನೋಜ್ ಅವರಿಗೆ ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ನಟಿಸಲು ಆಫರ್ ಬಂದಿತಂತೆ. 2013 ರ ಸಂದರ್ಭದಲ್ಲಿ ಸಂದೀಪ್ ರೆಡ್ಡಿ ವಂಗಾ ಮಂಚು ಮನೋಜ್ ಅವರಿಗೆ ‘ಅರ್ಜುನ್ ರೆಡ್ಡಿ’ ಸಿನಿಮಾದ ಕತೆ ಹೇಳಿದ್ದರಂತೆ. ಆದರೆ ವೈಯಕ್ತಿಕ ಕಾರಣಗಳಿಂದ ಆ ಸಿನಿಮಾದಲ್ಲಿ ನಟಿಸಿರಲಿಲ್ಲ. ಆದರೆ ಆ ಸಿನಿಮಾದಲ್ಲಿ ನಟಿಸದೇ ಇರುವುದಕ್ಕೆ ಬೇಸರ ಇದೆ. ಖ್ಯಾತ ನಿರ್ದೇಶಕನ ಜೊತೆಗೆ ತಾನು ಕೆಲಸ ಮಾಡುವ ಅವಕಾಶವನ್ನು ಕಳೆದುಕೊಂಡೆ ಎಂದು ಹೇಳಿದ್ದಾರೆ.

ಇದನ್ನು ಓದಿ: X&Y Movie: ʼರಾಮಾ ರಾಮಾ ರೇʼ ನಿರ್ದೇಶಕರ ಮತ್ತೊಂದು ವಿಭಿನ್ನ ಪ್ರಯತ್ನ ‘X&Y’; ಸತ್ಯಪ್ರಕಾಶ್ ಚಿತ್ರ ಶೀಘ್ರದಲ್ಲೇ ತೆರೆಗೆ

ಅರ್ಜುನ್ ರೆಡ್ಡಿ’ ಸಿನಿಮಾ ಅಲ್ಲದೆ, ರಾಮ್ ಚರಣ್ ನಟಿಸಿದ ‘ರಚ್ಚ’, ನಾಗ ಚೈತನ್ಯ ನಟಿಸಿದ ‘ಆಟೋನಗರ್ ಸೂರ್ಯ’ ಸಿನಿ ಮಾಗಳು ಕೂಡ ಮಂಚು ಮನೋಜ್​ಗೆ ಆಫರ್ ‌ನೀಡಲಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ನಟಿಸಲು ಸಾಧ್ಯ ವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಮಂಚು ಮನೋಜ್ 2017 ರ ಬಳಿಕ ಯಾವುದೇ ಸಿನಿ ಮಾದಲ್ಲಿ ನಾಯಕನಾಗಿ ನಟಿ ಸಿರಲಿಲ್ಲ. ದೀರ್ಘ ವಿರಾಮದ ನಂತರ, ಮನೋಜ್ ಭೈರವಂ ಚಿತ್ರದೊಂದಿಗೆ ಮರಳಿದ್ದಾರೆ, ಇದರಲ್ಲಿ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಮತ್ತು ನರ ರೋಹಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಿರಾಯ್’ ಸಿನಿಮಾದಲ್ಲೂ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ವಾಟ್ ದಿ ಫಿಶ್’ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ..