Monday, 28th October 2024

BBK 11: ಇವತ್ತಿನಿಂದ ಆಟ ಶುರು: ತ್ರಿವಿಕ್ರಮ್​ಗೆ ಸವಾಲು ಹಾಕಿದ ಮೋಕ್ಷಿತಾ

Mokshitha and Trivikram

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಐದನೇ ವಾರಕ್ಕೆ ಕಾಲಿಟ್ಟಿದೆ. ಆದರೆ, ನಾಲ್ಕನೇ ವಾರದ ಎಲಿಮಿನೇಷನ್ ಇನ್ನೂ ನಡೆದಿಲ್ಲ. ಸದ್ಯ ಡೇಂಜರ್ ಝೋನ್​ನಲ್ಲಿ ಹಂಸ ಮತ್ತು ಮೋಕ್ಷಿತಾ ಅವರಿದ್ದಾರೆ. ಇವರಿಬ್ಬರ ಪೈಕಿ ಒಬ್ಬರ ಪ್ರಯಾಣ ಇಂದಿನ ಎಪಿಸೋಡ್​ನಲ್ಲಿ ಅಂತ್ಯಗೊಳ್ಳಲಿದೆ. ಇವುಗಳ ಮಧ್ಯೆ ಬಿಗ್ ಬಾಸ್ ಮನೆಯೊಳಗೆ ತ್ರಿವಿಕ್ರಮ್ ಮತ್ತು ಮೋಕ್ಷಿತಾ ಮಧ್ಯೆ ದೊಡ್ಡ ಗಲಾಟೆ ನಡೆದಿದೆ. ಮಾತಿನ ಚಕಮಕಿಯ ನಡುವೆ ಮೋಕ್ಷಿತಾರವರು ತಿವಿಕ್ರಮ್​​ಗೆ ಗೋಮುಖ ವ್ಯಾಘ್ರ ಎಂದು ಕರೆದಿದ್ದಾರೆ.

ತ್ರಿವಿಕ್ರಮ್​- ಮೋಕ್ಷಿತಾ ಜಗಳಕ್ಕೆ ಏನು ಕಾರಣ?:

ಮೋಕ್ಷಿತಾ ಪೈ 10 ವಾರ ಇರ್ತಾರೆ ಅಷ್ಟೇ ಎಂದು ಉಗ್ರಂ ಮಂಜು ಬಳಿ ತ್ರಿವಿಕ್ರಮ್ ಹೇಳಿದ್ದರು. ಅದನ್ನ ಮೋಕ್ಷಿತಾ ಪೈ ಹಾಗೂ ಗೌತಮಿ ಜಾಧವ್ ಬಳಿ ಮಂಜು ಹೇಳಿಬಿಟ್ಟಿದ್ದಾರೆ. ಇಲ್ಲಿಂದ ಬೆಂಕಿ ಹತ್ತಿಕೊಂಡಿದೆ. ತಮ್ಮ ಮೇಲಿನ ತ್ರಿವಿಕ್ರಮ್ ಆರೋಪಕ್ಕೆ ಮೋಕ್ಷಿತಾ ಸಿಟ್ಟಾಗಿದ್ದಾರೆ. ನಾನು ಕೇವಲ 10 ವಾರಕ್ಕೆ ಬಂದಿಲ್ಲ. ಆಟ ಆಡೋಕೆ ಬಂದಿದ್ದೇನೆ ಅಂತಲೇ ರಿಯಾಕ್ಟ್ ಮಾಡಿದ್ದಾರೆ. ನಾನು 10 ವಾರ ಇರ್ತೀನಿ ಅಂತ ಡಿಸೈಡ್ ಮಾಡೋಕೆ ಇವರು ಯಾರು? ನಾವೆಲ್ಲಾ ಏನೂ ಅಲ್ಲ. ಯಾವುದೋ ಒಂದು ಸೀರಿಯಲ್‌ ಐದುವರೆ ವರ್ಷ ಮಾಡಿಕೊಂಡು ಸುಮ್ಮನೆ ಬಂದಿದ್ದೀವಿ ಇಲ್ಲಿ. ಯು ಆರ್ ನಂಥಿಂಗ್.. ತಿಳ್ಕೊಂಡ್ ಬಿಡಿ.. ಗೋಮುಖ ವ್ಯಾಘ್ರ ತರಹ ಆಟಾಡುತ್ತಿದ್ದೀರಾ ಎಂದು ಹೇಳಿದ್ದಾರೆ.

ಇವತ್ತಿಂದ ಆಟ ಶುರು. ಯಾರ್ಯಾರು ಈ ಮನೆಯಲ್ಲಿ 10 ವಾರದವರು ಅಂತ ನಾನೂ ನೋಡೇ ಬಿಡ್ತೀನಿ ಎಂದಿದ್ದಾರೆ. ಇದಕ್ಕೆ ಉತ್ತರ ಕೊಟ್ಟ ತ್ರಿವಿಕ್ರಮ್, ಆಯ್ತಮ್ಮ.. ನೀನು ಫಿನಾಲೆಗೆ ಹೋಗಮ್ಮ. ಬಿಗ್ ಬಾಸ್ ನಂದಾ? ಎಂದು ಹೇಳಿದ್ದಾರೆ. ಒಟ್ಟಾರೆ ಇಷ್ಟು ದಿನ ಸೈಲೆಂಟ್ ಆಗಿದ್ದ ಮೋಕ್ಷಿತಾ ಇದೀಗ ವೈಲೆಂಟ್ ಆಗಿರುವುದನ್ನು ಪ್ರೇಕ್ಷಕರು ಖುಷಿ ಆಗಿದ್ದಾರೆ. ಆದರೆ ಈ ಒಂದು ಕಿಚ್ಚು ಹತ್ತಲು ಉಗ್ರಂ ಮಂಜುನೇ ಕಾರಣ ಎಂಬುದನ್ನು ತಿಳಿದು ಬೇಸರ ಕೂಡ ವ್ಯಕ್ತಪಡಿಸಿದ್ದಾರೆ.

ನಾಲ್ಕನೇ ವಾರ ದೊಡ್ಮನೆಯಿಂದ ಹೊರಹೋಗಲು ಒಟ್ಟು ಒಂಬತ್ತು ಮಂದಿ ನಾಮಿನೇಟ್ ಆಗಿದ್ದರು. ಇದರಲ್ಲಿ ಉಗ್ರಂ ಮಂಜು ಹಾಗೂ ಮಾನಸಾ ನೇರ ನಾಮಿನೇಟ್ ಆಗಿದ್ದರು. ಇವರ ಜೊತೆಗೆ ಗೋಲ್ಡ್ ಸುರೇಶ್, ಶಿಶಿರ್ ಶಾಸ್ತ್ರೀ, ಗೌತಮಿ, ಹಂಸ, ಮೋಕ್ಷಿತಾ, ಚೈತ್ರಾ ಕುಂದಾಪುರ ಹಾಗೂ ಭವ್ಯಾ ಕೂಡ ನಾಮಿನೇಟ್ ಆಗಿದ್ದರು. ಇವರಲ್ಲಿ ಮಾನಸಾ ಮನೆಯಿಂದ ಹೊರಹೋಗಲಿದ್ದರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದು ಸುಳ್ಳಾಗಿದೆ.

ಸದ್ಯ ಡೇಂಜರ್ ಝೋನ್​ನಲ್ಲಿ ಹಂಸ ಹಾಗೂ ಮೋಕ್ಷತಾ  ಇಬ್ಬರು ಸ್ಪರ್ಧಿಗಳು ಮಾತ್ರ ಇದ್ದಾರೆ. ಇವರಿಬ್ಬರಲ್ಲಿ ಯಾರು ಮನೆಗೆ ಹೋಗುತ್ತಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದು ಬರಲಿದೆ.

BBK 11: ಸುದೀಪ್ ತಾಯಿ ನಿಧನದ ಸುದ್ದಿ ಕೇಳಿ ಶಾಕ್ ಆದ ಬಿಗ್ ಬಾಸ್ ಮನೆಯೊಳಗಿನ ಸ್ಪರ್ಧಿಗಳು