Saturday, 5th October 2024

BBK 11: ಜಗದೀಶ್​ಗೆ ಆಸ್ಕರ್ ಅವಾರ್ಡ್ ಕೊಡ್ಬೇಕು: ಕಿಚ್ಚನ ಮುಂದೆ ಎಲ್ಲ ಬಾಯ್ಬಿಟ್ಟ ಉಗ್ರಂ ಮಂಜು

Ugram Manju and Kiccha Sudeep

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada) ಮೊದಲ ಪಂಚಾಯಿತಿ ವಾರದ ಕತೆ ಕಿಚ್ಚನ ಜೊತೆ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಮೊದಲ ವಾರದಲ್ಲಿ ಏನೆಲ್ಲ ನಡೆಯಿತು, ಹೇಗಿತ್ತು ಎಂಬ ಬಗ್ಗೆ ಎಲ್ಲ ಸ್ಪರ್ಧಿಗಳಿಂದ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಜೊತೆಗೆ ಜಗಳ, ಜಗದೀಶ್ ಅವರ ಮಾತುಗಳು ಸೇರಿದಂತೆ ಎಲ್ಲ ವಿಚಾರದ ಬಗ್ಗೆ ಚರ್ಚೆ ಜೋರಾಗಿಯೆ ಇದೆ. ನಿಮ್ಮ ಶೋ ಹಾಳು ಮಾಡ್ತೀನಿ ಎಂದಿದ್ದ ಜಗದೀಶ್ ಅವರಿಗೆ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇವುಗಳ ಮಧ್ಯೆ ಉಗ್ರಂ ಮಂಜು ಕೂಡ ಮೊದಲ ವಾರದ ಅನುಭವ ಹಂಚಿಕೊಂಡಿದ್ದಾರೆ.

ಸುದೀಪ್ ಅವರ ಜೊತೆ ಮಾತನಾಡುತ್ತಾ ಮಂಜು ಅವರು ಮೊದಲು ನಮ್ಮ ದಿನ ಹೇಗಿರುತ್ತಿತ್ತು ಎಂದು ಹೇಳಿದ್ದಾರೆ. ‘ಬೆಳಗ್ಗೆ ಎದ್ದು ಹಲ್ಲು ಉಜ್ಜಿ ಇರುತ್ತೇವೊ ಗೊತ್ತಿಲ್ಲ ಆದರೆ ಮೀಟಿಂಗ್ ಅಂತಾ ಕರಿತಾರೆ, ಮೀಟಿಂಗ್ ಅಂತ ಕರ್ಕೊಂಡ ಹೋಗ್ತರೆ. ಅದಾದ ಮೇಲೆ ರಾತ್ರಿ ಒಬ್ಬರು ಬರ್ತಾರೆ, ಅವರದ್ದು ರುದ್ರ ತಾಂಡವ ಆಸ್ಕರ್ ಅವಾರ್ಡ್ ಕೊಡಬೇಕು ಅವರಿಗೆ. ರಾತ್ರಿ ಎಲ್ಲ ಆದ್ಮೇಲೆ ಬೆಳಗ್ಗೆ ಬಂದು ಸ್ವಾರಿ ಅಂತ ಮಗು ತರಾ ಕೇಳ್ತಾರೆ, ನನ್ನ ಬಿಟ್ಟುಬಿಡಿ ಅಂತ ಕೇಳ್ತಾರೆ. ರಾತ್ರಿ ಆಚೆ ಬಂದ್ರೆ ಕೇಸ್ ಅಂತಾರೆ-ಬೆಳಗ್ಗೆ ನಾವಿಬ್ರು ಕೂತ್ಕೊಂಡು ಒಂದು ಚಾಟ್ ಮಾಡೋಣ ಅಂತಾರೆ. ಈ ಕಡೆ ಅಡಿಗೆ ಮನೆಗೆ ಹೋದ್ರೆ ನಿಮ್ಗೆ ಯಾಕೆ ಮಾಡಿಕೊಡಬೇಕು ನಾವು ಅಂತಾರೆ. ಮೊದಲ ವಾರ ತುಂಬಾನೆ ಮಜಾ ಇದೆ’ ಎಂದು ಸುದೀಪ್ ಅವರಲ್ಲಿ ಹೇಳಿದ್ದಾರೆ.

ಜಗದೀಶ್​ಗೆ ಕಿಚ್ಚನ ಕ್ಲಾಸ್:

ಶನಿವಾರದ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಸುದೀಪ್ ಅವರು ಜಗದೀಶ್​ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸುದೀಪ್ ಅವರು ಜಗದೀಶ್ ಬಳಿ ‘ನೀವು ಹೇಳಿ ನನ್ಗೆ ಶೋ ಹೇಗೆ ನಡೆಸಿಕೊಳ್ಳಬೇಕು’ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಜಗದೀಶ್ ‘ನಿಮ್ಮದು ಕರೆಕ್ಟ್ ಆಗಿದೆ ಸರ್, ನಿಮ್ಮದೇನು ತಪ್ಪಿಲ್ಲ’ ಎಂದಿದ್ದಾರೆ.

ಇಲ್ಲಿಗೆ ನಿಲ್ಲಿಸದ ಸುದೀಪ್ ‘ಶೋ ಕಡಾಖಂಡಿತವಾಗಿ ಕರೆಕ್ಟ್ ಆಗಿಯೇ ಇದೆ, ಇಲ್ಲಂದ್ರೆ 11ನೇ ಸೀಸನ್ ದಾಟುತ್ತನೇ ಇರಲಿಲ್ಲ. ಕ್ಯಾಮೆರಾ ಮುಂದೆ ಬಿಗ್ ಬಾಸ್​ಗೆ ಚಾಲೆಂಜ್ ಮಾಡಿದ್ರಿ ಅಲ್ವಾ ಅದು ತಪ್ಪೇ ಅಲ್ಲ, ಅದೊಂದು ಜೋಕ್. ಬಿಗ್ ಬಾಸ್ ಎನ್ನುವುದು ಒಂದು ಅದ್ಭುತವಾದ ಶೋ. ಈ ಶೋ ಅನ್ನು ಇಂಪ್ರೂವ್ ಮಾಡುವಂತ ಸಾಧ್ಯತೆ ಈಗ ಇರೋ ನಿಮ್ಮ ಕೈಯಲ್ಲಿದೆ. ಹಾಳು ಮಾಡೋಕೆ ನಿಮ್ ಅಪ್ಪನಾಣೆಗೂ ಸಾಧ್ಯವಿಲ್ಲ’ ಎಂದು ಸುದೀಪ್ ಅವರು ಖಡಕ್ ಆಗಿ ಹೇಳಿದ್ದಾರೆ.

BBK 11: ಈ ಶೋ ಹಾಳು ಮಾಡೋಕೆ ನಿಮ್ ಅಪ್ಪನಾಣೆಗೂ ಸಾಧ್ಯವಿಲ್ಲ: ಲಾಯರ್ ಜಗದೀಶ್ ಮೈಚಳಿ ಬಿಡಿಸಿದ ಸುದೀಪ್