Thursday, 19th September 2024

ತಪೋವನದಲ್ಲಿ ರಕ್ಷಣಾ ಕಾರ‍್ಯಾಚರಣೆ ಮುಂದುವರಿಕೆ

ತಪೋವನ (ಉತ್ತರಾಖಂಡ): ಧೌಲಿ ಗಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದರಿಂದ ಗುರುವಾರ ಸಂಜೆ ವೇಳೆ ಸ್ಥಗಿತವಾಗಿದ್ದ ಕಾರ‍್ಯಾಚರಣೆ ಶುಕ್ರವಾರ 6ನೇ ದಿನ ರಕ್ಷಣಾ ಕಾರ್ಯಾ ಚರಣೆ ಮುಂದುವರಿಸಲಾಗಿದೆ.

ಪ್ರವಾಹದಿಂದಾಗಿ ಇದುವರೆಗೆ 36 ಜನರು ಮೃತಪಟ್ಟಿದ್ದಾರೆ. 204ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಸುರಂಗದೊಳಗೆ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಪಡೆ ಸಿಬ್ಬಂದಿ ಹೊರ ಬಂದಿದ್ದರು. ಕೆಸರು ಹಾಗೂ ಅವಶೇಷ ತೆಗೆಯುತ್ತಿದ್ದ ಭಾರಿ ಯಂತ್ರಗಳನ್ನು ಕೂಡ ಹೊರ ತೆಗೆಯಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಸ್ವಾತಿ ಎಸ್‌. ಭಡಾರಿಯಾ ತಿಳಿಸಿದ್ದರು.