Saturday, 7th September 2024

ಜೂನ್ 15ರೊಳಗೆ ಕಚೇರಿ ಖಾಲಿ ಮಾಡಿ: ಆಪ್‌ಗೆ ಶಾಕ್‌

ವದೆಹಲಿ: ಆಮ್ ಆದ್ಮಿ ಪಕ್ಷವು ರೂಸ್ ಅವೆನ್ಯೂದಲ್ಲಿರುವ ಪಕ್ಷದ ಕಚೇರಿಯನ್ನ ಖಾಲಿ ಮಾಡಬೇಕಾಗುತ್ತದೆ. ಜೂನ್ 15ರೊಳಗೆ ಕಚೇರಿಯನ್ನು ಖಾಲಿ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಕಚೇರಿಯ ಭೂಮಿಗಾಗಿ ಪಕ್ಷವು ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅದೇ ಸಮಯದಲ್ಲಿ, ಈ ಭೂಮಿ ದೆಹಲಿ ಹೈಕೋರ್ಟಿಗೆ ನೀಡಿದ ಭೂಮಿಯ ಅತಿಕ್ರಮಣವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹೆಚ್ಚುವರಿ ನ್ಯಾಯಾಲಯವನ್ನ ನಿರ್ಮಿಸುವುದು ಈ ಭೂಮಿಯ ಉದ್ದೇಶವಾಗಿದೆ. ಮುಂಬರುವ ಚುನಾವಣೆಗಳನ್ನ ಗಮನದಲ್ಲಿಟ್ಟು ಕೊಂಡು, ನಾವು ನಿಮಗೆ ಹೆಚ್ಚುವರಿ ಸಮಯವನ್ನ ನೀಡುತ್ತಿದ್ದೇವೆ” ಎಂದು ಉನ್ನತ ನ್ಯಾಯಾಲಯ ಹೇಳಿದೆ.

Leave a Reply

Your email address will not be published. Required fields are marked *

error: Content is protected !!