Monday, 16th September 2024

ತಿರುಪತಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಪೊಲೀಸರ ವಶಕ್ಕೆ

ಹೈದರಾಬಾದ್: ಚಿತ್ತೂರು ಜಿಲ್ಲೆಯಲ್ಲಿ ಪಕ್ಷದ ಪರವಾಗಿ ಅನುಮತಿಯಿಲ್ಲದಿದ್ದರೂ ಪ್ರಚಾರಕ್ಕೆ ಮುಂದಾಗಿದ್ದ ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡುರನ್ನು ಪೊಲೀಸರು ವಶಕ್ಕೆ ಪಡೆದರು.

ತಿರುಪತಿ ವಿಮಾನ ನಿಲ್ದಾಣದ ಮೂಲಕ ಚಿತ್ತೂರಿಗೆ ತೆರಳಲು ಆಗಮಿಸಿದ್ದ ನಾಯ್ಡು ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆಯಲಾಗಿದೆ. ಈ ವೇಳೆ ಸ್ಥಳದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ ನಾಯ್ಡು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ಈ ವೇಳೆ ನಾಯ್ಡು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿತ್ತೂರಿನಲ್ಲಿ ಪಕ್ಷದ ಪರವಾಗಿ ನಾಯ್ಡು ಪ್ರಚಾರಕ್ಕೆ ತೆರಳುತ್ತಿದ್ದರು. ಪೊಲೀಸರ ನಡೆ ಖಂಡಿಸಿರುವ ನಾಯ್ಡು, ನಮ್ಮನ್ನು ತಡೆಯಲು ಸಾಧ್ಯವಿಲ್ಲ. ನಾನು ಜನರ ಬಳಿ ಹೋಗುವುದನ್ನು ತಡೆಯಲು ಸರ್ಕಾರದ ಪ್ರಾಯೋಜಿತ ಮಾರಾಟಗಾರರಿಂದ ಸಾಧ್ಯ ವಿಲ್ಲ ಎಂದು ಗುಡುಗಿದ್ದಾರೆ.

Leave a Reply

Your email address will not be published. Required fields are marked *