Friday, 20th September 2024

ಸ್ವಯಂ ದೇವಮಾನವ ಅಸಾರಾಂ ಶಿಕ್ಷೆ ಅಮಾನತು ಅರ್ಜಿ ವಜಾ

ನವದೆಹಲಿ : ಆಯುರ್ವೇದ ಕೇಂದ್ರದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ತನ್ನ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವಂತೆ ಕೋರಿ ಸ್ವಯಂ ದೇವಮಾನವ ಅಸಾರಾಂ ಬಾಪು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾ ಮಾಡಿದೆ.

ಆಯುರ್ವೇದ ಚಿಕಿತ್ಸೆಗಾಗಿ ಸ್ವಯಂ ದೇವಮಾನವ ಎರಡು ತಿಂಗಳ ಮಧ್ಯಂತರ ಜಾಮೀನು ಕೇಳಿದ್ದರು. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಕ್ಕಾಗಿ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮೇ ತಿಂಗಳಲ್ಲಿ, ಅಸಾರಾಂ ಬಾಪು ಕರೋನಾ ವೈರಸ್‌ಗೆ ತುತ್ತಾಗಿದ್ದರು ಹಾಗೂ ಜೋಧಪುರದ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲ್ಪಟ್ಟರು. ಅಸಾರಾಂ ಅವರು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು ಆರೋಗ್ಯದ ಆಧಾರದ ಮೇಲೆ ಜಾಮೀನು ಕೋರಿ ದ್ದಾರೆ.

ರಾಜಸ್ಥಾನ ಹೈಕೋರ್ಟ್ ಈ ಹಿಂದೆ ಜೋಧ್‌ಪುರ ಕೇಂದ್ರ ಕಾರಾಗೃಹದ ಹೊರಗಿನ ಆಹಾರವನ್ನು ದಿನಕ್ಕೆ ಒಂದು ಬಾರಿ ಸೇವಿಸಲು ಅವಕಾಶ ನೀಡಿತ್ತು. ಆದಾಗ್ಯೂ, ಜೈಲು ಅಧಿಕಾರಿಗಳು ಮೊದಲು ಹೊರಗಿನಿಂದ ತಂದ ಆಹಾರವನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು ಎಂದು ಅಸಾರಾಂಗೆ ಅನುಮತಿ ನೀಡುವ ಮೊದಲು ನ್ಯಾಯಾಲಯ ಹೇಳಿದೆ.